ರಾಷ್ಟ್ರಮಟ್ಟದಲ್ಲಿ ಮತ್ತೊಂದು ‘ಮಹಾಮೈತ್ರಿ’ ರಚಿಸುತ್ತೇವೆ: ಶರದ್ ಯಾದವ್
Update: 2017-08-27 13:04 GMT
ಪಾಟ್ನಾ, ಆ.27: ಎನ್ ಡಿಎ ಮೈತ್ರಿಕೂಟವನ್ನು ಮಣಿಸಲು ರಾಷ್ಟ್ರಮಟ್ಟದಲ್ಲಿ ಮತ್ತೊಂದು ‘ಮಹಾಮೈತ್ರಿ’ಯನ್ನು ರಚಿಸುತ್ತೇವೆ ಎಂದು ಜೆಡಿಯು ಬಂಡಾಯ ನಾಯಕ ಶರದ್ ಯಾದವ್ ಹೇಳಿದ್ದಾರೆ.
‘ಬಿಜೆಪಿ ತೊಲಗಿಸಿ-ದೇಶ ಉಳಿಸಿ’ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಷ್ಟ್ರಮಟ್ಟದಲ್ಲಿ ಮತ್ತೊಂದು ಮಹಾಮೈತ್ರಿಯನ್ನು ನಾವು ರಚಿಸುತ್ತೇವೆ ಎಂದು ಬಿಹಾರದಲ್ಲಿ ಮಹಾಮೈತ್ರಿಯನ್ನು ಮುರಿದವರಿಗೆ ಹೇಳಲು ಇಚ್ಛಿಸುತ್ತೇನೆ ಎಂದು ಶರದ್, ನಿತೀಶ್ ಕುಮಾರ್ ಅವರನ್ನು ಕುಟುಕಿದರು.
ಬಿಹಾರದಲ್ಲಿ ಜೆಡಿಯು-ಆರ್ ಜೆಡಿ ಹಾಗೂ ಕಾಂಗ್ರೆಸ್ ಮಹಾಮೈತ್ರಿಯನ್ನು ಮುರಿದಿರುವುದು ಬಿಹಾರದ ಜನತೆಗೆ ಮಾಡಿದ ನಂಬಿಕೆದ್ರೋಹವಾಗಿದೆ ಹಾಗೂ ಅವರ ಆದೇಶದ ವಿರುದ್ಧವಾಗಿದೆ. ಜನರಿಗೆ ಮೋಸ ಮಾಡಲಾಗಿದೆ. 1.25 ಕೋಟಿ ಜನರ ಮಹಾಮೈತ್ರಿಯನ್ನು ಸ್ಥಾಪಿಸುವುದಕ್ಕಾಗಿ ದೇಶದ ಮೂಲೆಮೂಲೆಗೂ ಭೇಟಿ ನೀಡುತ್ತೇನೆ ಎಂದು ಶರದ್ ಯಾದವ್ ಹೇಳಿದರು.