ರಾಷ್ಟ್ರಮಟ್ಟದಲ್ಲಿ ಮತ್ತೊಂದು ‘ಮಹಾಮೈತ್ರಿ’ ರಚಿಸುತ್ತೇವೆ: ಶರದ್ ಯಾದವ್

Update: 2017-08-27 13:04 GMT

ಪಾಟ್ನಾ, ಆ.27: ಎನ್ ಡಿಎ ಮೈತ್ರಿಕೂಟವನ್ನು ಮಣಿಸಲು ರಾಷ್ಟ್ರಮಟ್ಟದಲ್ಲಿ ಮತ್ತೊಂದು ‘ಮಹಾಮೈತ್ರಿ’ಯನ್ನು ರಚಿಸುತ್ತೇವೆ ಎಂದು ಜೆಡಿಯು ಬಂಡಾಯ ನಾಯಕ ಶರದ್ ಯಾದವ್ ಹೇಳಿದ್ದಾರೆ.

‘ಬಿಜೆಪಿ ತೊಲಗಿಸಿ-ದೇಶ ಉಳಿಸಿ’ ರ್ಯಾಲಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಷ್ಟ್ರಮಟ್ಟದಲ್ಲಿ ಮತ್ತೊಂದು ಮಹಾಮೈತ್ರಿಯನ್ನು ನಾವು ರಚಿಸುತ್ತೇವೆ ಎಂದು ಬಿಹಾರದಲ್ಲಿ ಮಹಾಮೈತ್ರಿಯನ್ನು ಮುರಿದವರಿಗೆ ಹೇಳಲು ಇಚ್ಛಿಸುತ್ತೇನೆ ಎಂದು ಶರದ್, ನಿತೀಶ್ ಕುಮಾರ್ ಅವರನ್ನು ಕುಟುಕಿದರು.

ಬಿಹಾರದಲ್ಲಿ ಜೆಡಿಯು-ಆರ್ ಜೆಡಿ ಹಾಗೂ ಕಾಂಗ್ರೆಸ್ ಮಹಾಮೈತ್ರಿಯನ್ನು ಮುರಿದಿರುವುದು ಬಿಹಾರದ ಜನತೆಗೆ ಮಾಡಿದ ನಂಬಿಕೆದ್ರೋಹವಾಗಿದೆ ಹಾಗೂ ಅವರ ಆದೇಶದ ವಿರುದ್ಧವಾಗಿದೆ. ಜನರಿಗೆ ಮೋಸ ಮಾಡಲಾಗಿದೆ. 1.25 ಕೋಟಿ ಜನರ ಮಹಾಮೈತ್ರಿಯನ್ನು ಸ್ಥಾಪಿಸುವುದಕ್ಕಾಗಿ ದೇಶದ ಮೂಲೆಮೂಲೆಗೂ ಭೇಟಿ ನೀಡುತ್ತೇನೆ ಎಂದು ಶರದ್ ಯಾದವ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News