×
Ad

ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯರಾಗಿ ಯಸ್. ಸಂಶುದ್ದೀನ್ ನೇಮಕ

Update: 2017-08-30 18:42 IST

ಸುಳ್ಯ, ಆ. 30: ಕರ್ನಾಟಕ ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯರಾಗಿ ನೇಮಕಾತಿ ಹೊಂದಿದ ಕೆ.ಪಿ.ಸಿ.ಸಿ. ಅಲ್ಪಸಂಖ್ಯಾತರ ವಿಭಾಗದ ಸಂಚಾಲಕರಾದ ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಯಸ್. ಸಂಶುದ್ದೀನ್ ಅವರನ್ನು ಅಭಿನಂದಿಸಲಾಯಿತು.

ವಾಲಿಬಾಲ್ ಅಸೋಸಿಯೇಶನ್ ಜಿಲ್ಲಾ ಉಪಾಧ್ಯಕ್ಷರು, ತಾಲೂಕು ಅಧ್ಯಕ್ಷರೂ ಆಗಿ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ಸಂಶುದ್ದೀನ್‌ ಅವರು ಸುಳ್ಯ ತಾಲೂಕು ಅಲ್ಪಸಂಖ್ಯಾತರ ಸಹಕಾರಿ ಸಂಘದ ಮಾಜಿ ಅಧ್ಯಕ್ಷರು, ಮೊಗರ್ಪಣೆ ಜುಮಾ ಮಸೀದಿಯ ಮಾಜಿ ಅಧ್ಯಕ್ಷರು, ಎ.ಪಿ.ಎಂ.ಸಿ. ಮಾಜಿ ನಿರ್ದೇಶಕರೂ ಆಗಿ ಕಾರ್ಯ ನಿರ್ವಹಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ  ರಮಾನಾಥ ರೈ ಅವರ ಶಿಫಾರಸ್ಸಿನಂತೆ ರಾಜ್ಯ ವಕ್ಫ್ ಸಚಿವ ತನ್ವೀರ್ ಸೇಠ್‌ ಅವರ ಅನುಮೋದನೆಯೊಂದಿಗೆ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಈ ನೇಮಕಾತಿಯನ್ನು ಮಾಡಿರುತ್ತಾರೆ.

ನಿಮ್ಮ ಕಾರ್ಯದಕ್ಷತೆಗೆ ಸಂದ ಗೌರವ ಇದಾಗಿರುತ್ತದೆ ಎಂದು ಹಾಜಿ ಪಿ. ಇಸಾಕ್ ಸಾಹೇಬ್‌, ಹಾಜಿ ಆದಂ ಕುಂಞಿ ಕಮ್ಮಾಡಿ, ಹಾಜಿ ಜಿ. ಇಬ್ರಾಹಿಂ ಹಾಗೂ ಇತರರು ಅಭಿನಂದಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News