ಉಡುಪಿ: ಯಾಜಿ ಯಕ್ಷಪಂಚಮಿ ಉದ್ಘಾಟನೆ
Update: 2017-09-06 21:47 IST
ಉಡುಪಿ, ಸೆ.6:ಪರ್ಯಾಯ ಶ್ರೀ ಪೇಜಾವರ ಮಠದ ಆಶ್ರಯದಲ್ಲಿ ಯಾಜಿ ಯಕ್ಷಮಿತ್ರ ಮಂಡಳಿ ಕುಮಟಾ ಇವರು ಆಯೋಜಿಸಿರುವ ಯಾಜಿ ಯಕ್ಷಪಂಚಮಿಯ ಕಾರ್ಯಕ್ರಮವನ್ನು ಪೇಜಾವರ ಕಿರಿಯ ಯತಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಇಂದು ಸಂಜೆ ಶ್ರೀ ಕೃಷ್ಣ ವುಠದ ರಾಜಾಂಗಣದಲ್ಲಿ ಉದ್ಘಾಟಿಸಿದರು.ಯಕ್ಷ ಕಲಾವಿದರಾದ ಬಳ್ಕೂರು ಕೃಷ್ಣಯಾಜಿ ಅವರು ಅಶಕ್ತ ಹಿರಿಯ ಯಕ್ಷಗಾನ ಕಲಾವಿದರಿಗೆ ಸಹಾಯ ಮಾಡಿಕೊಂಡು ಪರಿಶುದ್ಧ ಕಲೆಯನ್ನೂ ಸಮಾಜಕ್ಕೆ ನೀಡುತ್ತಿರುವುದು ಶ್ಲಾಘನೀಯ ಕಾರ್ಯ. ಶ್ರೀಕೃಷ್ಣನ ಕ್ಷೇತ್ರದಲ್ಲಿ ಯಕ್ಷಗಾನ ಕಲೆಯ ಮೂಲಕ ಕೃಷ್ಣನನ್ನು ಆರಾಧನೆ ಮಾಡುತ್ತಿದ್ದಾರೆ ಎಂದವರು ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಪ್ರದೀಪ್ ಕುಮಾರ್ ಕಲ್ಕೂರ, ಕಬ್ಯಾಡಿ ಜಯರಾಮ ಆಚಾರ್ಯ, ಉದಯಕುಮಾರ್ ಶೆಟ್ಟಿ, ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಬ್ಕೂರು ಕೃಷ್ಣಯಾಜಿ ಉಪಸ್ಥಿತರಿದ್ದರು.
ಪ್ರೊ.ಎಂ.ಎಲ್.ಸಾಮಗ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.