ಆತ್ಮಹತ್ಯೆ
Update: 2017-09-15 22:54 IST
ಕಾಪು, ಸೆ.15: ವಿಪರೀತ ಕುಡಿತದ ಚಟ ಹೊಂದಿದ್ದ ಉಳಿಯಾರಗೋಳಿ ಗ್ರಾಮದ ಪೊಲಿಪು ಗುಡ್ಡೆಯ ನಿವಾಸಿ, ವಿಕಲಚೇತನ ರವೀಂದ್ರ ಶೆಟ್ಟಿ(36) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಸೆ.15ರಂದು ಬೆಳಗಿನ ಜಾವ ಮನೆಯ ಕೊಟ್ಟಿಗೆಯ ರೀಪಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.