ನಿರೀಕ್ಷಣಾ ಜಾಮೀನು ಕೋರಿ ಉಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ ಕಾವ್ಯಾ ಮಾಧವನ್

Update: 2017-09-16 16:34 GMT

ಕೊಚ್ಚಿ, ಸೆ. 16:  ನಟಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಬಂಧನದಲ್ಲಿರುವ ನಟ ದಿಲೀಪ್ ಪತ್ನಿ ನಟಿ ಕಾವ್ಯಾ ಮಾಧವನ್ ನಿರೀಕ್ಷಣಾ ಜಾಮೀನು ಕೋರಿ ಕೇರಳ ಉಚ್ಚ ನ್ಯಾಯಾಲಯಕ್ಕೆ ಶನಿವಾರ ಅರ್ಜಿ ಸಲ್ಲಿಸಿದ್ದಾರೆ.

 ನಟಿಯ ಅಪಹರಣ ಹಾಗೂ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಪೊಲೀಸರು ನಟಿಯನ್ನು ಬಂಧಿಸಬಹುದೆನ್ನುವ ವರದಿಯ ಹಿನ್ನೆಲೆಯಲ್ಲಿ ನಟಿ ಕಾವ್ಯಾ ಮಾಧವನ್ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

 ಕಾವ್ಯಾ ಮಾಧವನ್‌ಗೆ ಪ್ರಕರಣದ ಪ್ರಧಾನ ಆರೋಪಿ ಪಲ್ಸರ್ ಸುನಿ ಆಲಿಯಾಸ್ ಸುನೀಲ್ ಕುಮಾರ್ ಅವರ ಪರಿಚಯವಿತ್ತು ಎಂಬ ಬಗ್ಗೆ ಪುರಾವೆಗಳು ದೊರಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.

 ಘಟನೆ ನಡೆಯುವುದಕ್ಕಿಂತ ಮುನ್ನ ಫೆಬ್ರವರಿಯಲ್ಲಿ ಸುನಿ ಕೊಚ್ಚಿಯ ವೆನ್ನಾಲಾದಲ್ಲಿರುವ ಕಾವ್ಯ ಮಾಧವನ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು ಹಾಗೂ ನಟಿಯ ತಾಯಿಯಿಂದ 25 ಸಾವಿರ ರೂ. ಅಡ್ವಾನ್ಸ್ ಸ್ವೀಕರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News