×
Ad

​ಖಂಡಿಗೆ ದೇವಳದ ಸೊತ್ತು ಕಳವು

Update: 2017-09-16 22:33 IST

ಮಲ್ಪೆ, ಸೆ.16: ಪಡುತೋನ್ಸೆ ಗ್ರಾಮ ಗುಜ್ಜರಬೆಟ್ಟು ಖಂಡಿಗೆಯ ಶ್ರೀಭದ್ರ ಕಾಳಿ ಮಹಾಮಾರಿಕಾಂಬ ದೇವಸ್ಧಾನಕ್ಕೆ ಸೆ.15ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ಸಾವಿರಾರು ರೂ. ವೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ದೇವಸ್ಧಾನದ ಅರ್ಚಕರಾಗಿರುವ ರಾಘವೇಂದ್ರ ಭಟ್ ಸೆ.15ರಂದು ಸಂಜೆ ಪೂಜೆ ಮಾಡಿ ರಾತ್ರಿ 9ಗಂಟೆಗೆ ದೇವಸ್ದಾನದ ಗರ್ಭಗುಡಿಯ ಬಾಗಿಲಿಗೆ ಬೀಗ ಹಾಕಿ ಮನೆಗೆ ಹೊಗಿದ್ದರು. ಇಂದು ಬೆಳಗಿನ ಜಾವ ಸುಧಾಕರ ಪಾಲನ್ ದೇವಸ್ದಾನದ ಬಾಗಿಲು ತೆಗೆಯಲು ಹೋದಾಗ ದೇವಸ್ದಾನದ ಮುಖ್ಯದ್ವಾರದ ಬಾಗಿಲು ಮುರಿದು ಕಳವು ಮಾಡಿರುವುದು ಬೆಳಕಿಗೆ ಬಂತ್ತೆನ್ನಲಾಗಿದೆ.

ದೇವಸ್ದಾನದ ಮುಖ್ಯದ್ವಾರದ ಹಾಗೂ ಗರ್ಭಗುಡಿಗೆ ಹಾಕಿದ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು ದೇವಿಯ ಬೆಳ್ಳಿಯ ಪ್ರಭಾವಳಿ ಹಾಗೂ ಬೆಳ್ಳಿಯ ಮುಖವಾಡವನ್ನು ಕಳವು ಮಾಡಿದ್ದಾರೆ. ಕಳವಾದ ಸೊತ್ತುಗಳ ಒಟ್ಟು ವೌಲ್ಯ 50,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News