ಕಾಂಗ್ರೆಸ್ ತೊರೆದ ನಾರಾಯಣ್ ರಾಣೆ

Update: 2017-09-21 13:29 GMT

ಹೊಸದಿಲ್ಲಿ, ಸೆ.21: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನಾರಾಯಣ್ ರಾಣೆ ಗುರುವಾರ ಕಾಂಗ್ರೆಸ್ ಪಕ್ಷವನ್ನು ತೊರೆಯುವುದಾಗಿ ಘೋಷಿಸಿದ್ದಾರೆ.

“6 ತಿಂಗಳೊಳಗೆ ನನ್ನನ್ನು ಮುಖ್ಯಮಂತ್ರಿಯಾಗಿ ಮಾಡುವ ಭರವಸೆ ನೀಡಿದ್ದರಿಂದ ನಾನು ಕಾಂಗ್ರೆಸ್ ಸೇರಿದ್ದೆ. 12 ವರ್ಷಗಳ ಕಾಲ ನಾನು ಕಾದೆ. ನನಗೆ ಕಾಂಗ್ರೆಸ್ ನಲ್ಲಿ ಯಾವುದೇ ಸ್ಥಾನವಿಲ್ಲ ಎಂದು ಅರಿವಾದ ನಂತರ ಕಾಂಗ್ರೆಸ್ ತೊರೆಯಲು ನಿರ್ಧರಿಸಿದೆ” ಎಂದವರು ಹೇಳಿದ್ದಾರೆ.

2005ರಲ್ಲಿ ಶಿವಸೇನೆಯಿಂದ ಹೊರಹಾಕಿದ ನಂತರ ರಾಣೆ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು. ತಮ್ಮ ರಾಜೀನಾಮೆಯ ಬಗ್ಗೆ ರಾಣೆ ಸೋನಿಯಾ ಗಾಂಧಿಯವರಿಗೆ ಪತ್ರವನ್ನೂ ಸಹ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News