ರೈಲಿನಲ್ಲಿ ನಿವೃತ್ತ ಯೋಧನನ್ನು ಹತ್ಯೆಗೈದ ಲೂಟಿಕೋರರು

Update: 2017-09-21 13:22 GMT

ಮುಂಗೇರ,ಸೆ.21: ಅಪರಿಚಿತ ದುಷ್ಕರ್ಮಿಗಳು ಚಲಿಸುತ್ತಿದ್ದ ರೈಲಿನಲ್ಲಿ ಸೇನೆಯ ನಿವೃತ್ತ ಯೋಧನನ್ನು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಬಿಹಾರದ ಕಿಯುಲ್-ಭಾಗಲ್ಪುರ ವಿಭಾಗದಲ್ಲಿ ಪ್ರಯಾಣಿಕರನ್ನು ದೋಚಲು ಯತ್ನಿಸಿದ ವೇಳೆ ಈ ಹತ್ಯೆ ನಡೆದಿದೆ ಎಂದು ರೈಲ್ವೆ ಪೊಲೀಸರು ಶಂಕಿಸಿದ್ದಾರೆ.

ಗುರುವಾರ ಬೆಳಗಿನ ಜಾವ ಭಾಗಲ್ಪುರ-ಜಮಾಲಪುರ ಪ್ಯಾಸೆಂಜರ್ ರೈಲಿನ ಸಾಮಾನ್ಯ ಬೋಗಿಯಲ್ಲಿ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಮುಂಗೇರ ಜಿಲ್ಲೆಯ ತಿಕಾರಾಮ ಪುರ ಗ್ರಾಮದ ನಿವಾಸಿ, ನಿವೃತ್ತ ಯೋಧ ಉಮೇಶ ಶಾ ಎಂದು ಗುರುತಿಸಲಾಗಿದೆ ಎಂದು ಜಮಾಲಪುರ ರೈಲ್ವೆ ಪೊಲೀಸ್ ಠಾಣಾಧಿಕಾರಿ ಕೃಪಾಸಾಗರ ತಿಳಿಸಿದರು.

ಮೃತ ಶಾ ನಿವೃತ್ತಿಯ ಬಳಿಕ ಪ.ಬಂಗಾಳದ ಸಿಲಿಗುರಿಯಲ್ಲಿ ಸೇನೆಯ ಗುತ್ತಿಗೆ ಕಾರ್ಯಗಳನ್ನು ನಿರ್ವಹಿಸುತ್ತಿದ್ದರು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News