ಆಮ್ ಆದ್ಮಿ ಪಕ್ಷದಿಂದ ವಾರ್ಡ್ ಸಮಿತಿ ಸಭೆ

Update: 2017-09-21 13:33 GMT

ಮಂಗಳೂರು,ಸೆ.21:ದಕ್ಷಿಣ ಕನ್ನಡ ಜಿಲ್ಲೆ ಆಮ್ ಆದ್ಮಿ ಪಕ್ಷದ ವತಿಯಿಂದ ವಾರ್ಡ್ ಸಮಿತಿ ಸಭೆಯು ಇತ್ತೀಚೆಗೆ ಮಂಗಳೂರು ಕಚೇರಿಯಲ್ಲಿ ನಡೆಯಿತು.ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಜ್ಞಾನ್ ಸಾಗರ್ ರೈ ಅವರ ಉಪಸ್ಥಿತಿಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಆಪ್ ಮಂಗಳೂರು ಮಹಾನಗರ ಪಾಲಿಕೆಯ ಉಸ್ತುವಾರಿಯಾಗಿ ರಾಜೇಂದ್ರ ಕುಮಾರ್, ಆಪ್- ಎಂಸಿಸಿ  ವಲಯ ಒoದು ಮುಂದಾಳತ್ವವನ್ನು ತಾವರೆಜ,ಆಪ್ -ಎಂಸಿಸಿ ವಲಯ ಎರಡು( ಸುರತ್ಕಲ್) ಮುಂದಾಳತ್ವವನ್ನು ಕಬೀರ್ ಕಾಟಿಪಳ್ಳ, ಆಫ್- ಎಂಸಿಸಿ ವಲಯ ಮೂರು (ಕದ್ರಿ) ಮುಂದಾಳತ್ವವನ್ನು ದೇವಿ ಪ್ರಸಾದ್ ಗೆ ವಹಿಸಿಕೊಡಲಾಗಿದೆ . ಹಾಗೂ ಪತ್ರಿಕಾ ಮಾಧ್ಯಮ ವಕ್ತಾರರಾಗಿ    ರಾಜೇಂದ್ರ ಕುಮಾರ್ ಮತ್ತು ಜೆರಾರ್ಡ್ ಟವರ್ಸ್   ಅವರನ್ನು ನೇಮಕ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News