ಸೆ.23ರಂದು ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ಉದ್ಘಾಟನೆ

Update: 2017-09-21 15:36 GMT

ಉಡುಪಿ, ಸೆ.21: ರಾಮ್ ಸೇನಾ ಕರ್ನಾಟಕದ ವತಿಯಿಂದ ಆರಂಭಿಸಿರುವ ಸರ್ವ ಕಾಲೇಜು ವಿದ್ಯಾರ್ಥಿ ಶಕ್ತಿ ಸಂಘಟನೆಯ ಉದ್ಘಾಟನೆ ಸೆ.23ರಂದು ಬೆಳಗ್ಗೆ 11:30ಕ್ಕೆ ಮಣಿಪಾಲ ಆರ್‌ಎಸ್‌ಬಿ ಸಭಾಭವನದಲ್ಲಿ ನಡೆಯಲಿದೆ.

ಸಂಘಟನೆಯನ್ನು ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಲಿರುವರು. ಶಿರೂರು ಮಠಾಧೀಶ ಶ್ರೀಲಕ್ಷ್ಮಿವರ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡ ಲಿರುವರು. ಅಧ್ಯಕ್ಷತೆಯನ್ನು ರಾಮ್‌ಸೇನಾ ಕರ್ನಾಟಕದ ಸಂಸ್ಥಾಪಕ ಪ್ರಸಾದ್ ಅತ್ತಾವರ್ ವಹಿಸಲಿರುವರು ಎಂದು ಸೇನಾದ ಜಿಲ್ಲಾ ವಕ್ತಾರ ರಮೇಶ್ ಕಲ್ಲೊಟ್ಟೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿದ್ಯಾರ್ಥಿ ಶಕ್ತಿಯ ರಾಜ್ಯಾಧ್ಯಕ್ಷ ಗೌತಮ್ ಬಿ.ಕೆ., ಸಂತೋಷ್ ಶೆಟ್ಟಿ ಓದೂರು, ಶೈಲೇಶ್ ಕುಂದರ್, ಗುರುಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News