ಪೈಲೆಟ್ ಯೋಜನೆ ಕುರಿತು ಸಭೆ
Update: 2017-09-21 16:42 GMT
ಉಡುಪಿ, ಸೆ.21: ಚಿತ್ರಪಾಡಿ ಗ್ರಾಮದಲ್ಲಿ ನಡೆಯುವ 5 ಮತ್ತು 6ನೇ ವಾರ್ಡ್ನ ಕಸ ವಿಲೇವಾರಿ ಬಗ್ಗೆ ಪೈಲೆಟ್ ಯೋಜನೆ ಕುರಿತು ಸಾಲಿಗ್ರಾಮ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಇತ್ತೀಚೆಗೆ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಸಭೆ ನಡೆಯಿತು.
ಸಭೆ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯತ್ ಅಧ್ಯಕ್ಷೆ ರತ್ನಾ ನಾಗರಾಜ ಗಾಣಿಗ ವಹಿಸಿದ್ದರು. ಜಿಲ್ಲಾಡಳಿತ ಪರವಾಗಿ ಯೋಜನಾ ನಿರ್ದೇಶಕ ಅರುಣ್ಪ್ರಭ ವೇದಿಕೆಯಲ್ಲಿ ಉಪಸ್ಥಿತರಿದ್ದು, ಕಸ ಬೇರ್ಪಡಿಸುವಿಕೆ ಬಗ್ಗೆ ಮಾಹಿತಿ ನೀಡಿದರು.
ಕುಂದಾಪುರ ಪುರಸಭೆ ಪರಿಸರ ಅಭಿಯಂತರ ಮಂಜುನಾಥ ಶೆಟ್ಟಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಸ ನಿರ್ವಹಣೆಯ ಕುರಿತು ವಿವರವಾದ ಮಾಹಿತಿ ನೀಡಿದರು.
ಸಭೆಯಲ್ಲಿ ಸಾಲಿಗ್ರಾಮ ಪಟ್ಟಣ ಪಂಚಾಯತ್ನ ಮುಖ್ಯಾಧಿಕಾರಿ ಆರ್ ಶ್ರೀಪಾದ್, ಸಮುದಾಯ ಸಂಘಟನಾಧಿಕಾರಿ ಅರುಣ್ ಬಿ, ಪ.ಪಂಚಾಯತ್ ಕಿರಿಯ ಆರೋಗ್ಯ ನಿರೀಕ್ಷಕಿ ಮಮತಾ ಮಂಜುನಾಥ ಉಪಸ್ಥಿತರಿದ್ದರು.