​ಎಸ್.ಇ.ಡಿ.ಸಿ. ಮಹಾಸಭೆ : ಅಧ್ಯಕ್ಷರಾಗಿ ಕೆ.ಕೆ.ಎಂ. ಕಾಮಿಲ್ ಸಖಾಫಿ ಆಯ್ಕೆ

Update: 2017-09-21 18:05 GMT
ಜೆಪ್ಪು ಅಬ್ದುಲ್ ರಹ್ಮಾನ್ ಮದನಿ                                ಕೆ.ಕೆ.ಎಂ. ಕಾಮಿಲ್ ಸಖಾಫಿ

ಮಂಗಳೂರು,ಸೆ.21 : ಸುನ್ನೀ ಎಜ್ಯುಕೇಶನಲ್ ಡೆವಲಪ್ ಮೆಂಟ್  ಕಮಿಟಿ  ಆಫ್ ಕರ್ನಾಟಕ ಇದರ ಮಹಾಸಭೆ  ಇತ್ತೀಚೆಗೆ ಕಾಟಿಪಳ್ಳ ಜಾಸ್ಮೀನ್ ಮಹಲ್ ನಲ್ಲಿ  ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಕೆ.ಕೆ.ಎಂ.ಕಾಮಿಲ್ ಸಖಾಫಿ ವಹಿಸಿದ್ದರು. ಮಜೂರು ಅಬ್ದುರ್ರಶೀದ್ ಸಖಾಫಿ ಉದ್ಛಾಟಿಸಿದರು. ಪ್ರಧಾನ ಕಾರ್ಯದರ್ಶಿ ಜೆಪ್ಪು ಅಬ್ದುಲ್ ರಹ್ಮಾನ್ ಮದನಿ ಸ್ವಾಗತಿಸಿದರು.

ನೂತನ ಸಮಿತಿ 
ಅಧ್ಯಕ್ಷರು: ಕೆ.ಕೆ.ಎಂ. ಕಾಮಿಲ್ ಸಖಾಫಿ;  ಪ್ರಧಾನ ಕಾರ್ಯದರ್ಶಿ ಜೆಪ್ಪು ಅಬ್ದುಲ್ ರಹ್ಮಾನ್ ಮದನಿ; ಕೋಶಾಧಿಕಾರಿ : ಮುಫತ್ತಿಶ್ ಹಾಫಿಝ್ ಹನೀಫ್ ಮಿಸ್ಬಾಹೀ; ಉಪಾಧ್ಯಕ್ಷರುಗಳು:  ಆತೂರು ಸಅದ್ ಮುಸ್ಲಿಯಾರ್,  ಒ.ಕೆ.ಸಯೀದ್ ಮುಸ್ಲಿಯಾರ್, ಉರುಮನೆ ಇಸ್ಮಾಯಿಲ್ ಸಅದಿ, ಕಳಂಜಿಬೈಲು ಅಬ್ದುಲ್ ಹಮೀದ್ ಸಅದಿ, ಮಜೂರು ಅಬ್ದುಲ್ ರಶೀದ್ ಕಾಮಿಲ್ ಸಖಾಫಿ;  ಕಾರ್ಯದರ್ಶಿಗಳು : ಕಣ್ಣೂರು ಉಸ್ಮಾನ್ ಸಖಾಫಿ, ಬೆಟ್ಟಂಪಾಡಿ ಅಬ್ದುಲ್ ಅಝೀಝ್ ನೂರಾನಿ, ಸೈಫುಲ್ಲಾ ಸಖಾಫಿ ಸಾಗರ, ಕೆ.ಸಿ.ರೋಡ್ ಮುಹಮ್ಮದ್ ಮದನಿ, ಸರಳಿಕಟ್ಟೆ ಮುತ್ತಲಿಬ್ ಸಖಾಫಿ; ಹಿಫಾಝತ್ ಕಮಿಟಿ ಚಯರ್ಮಾನ್ : ಆತೂರು ಸಅದ್ ಮುಸ್ಲಿಯಾರ್,  ಕನ್ವೀನರ್ : ಮಾನಲ ಉಸ್ಮಾನ್ ಸಖಾಫಿ; ಬುಕ್ ಡಿಪ್ಪೋ ಚಯರ್ಮಾನ್ : ಒ.ಕೆ. ಸಈದ್ ಮುಸ್ಲಿಯಾರ್, ಕನ್ವೀನರ್:  ಅಬ್ದುಲ್ ಅಝೀಝ್ ನೂರಾನಿ; ಕ್ಷೇಮನಿಧಿ ವಿಭಾಗ ಚಯರ್ಮಾನ್ : ಅಬ್ದುಲ್ ಹಮೀದ್ ಸಅದಿ, ಕನ್ವೀನರ್  : ಮುಹಮ್ಮದ್ ಮದನಿ ಕೆ.ಸಿ.ರೋಡ್  ; ಪಿಂಚಣಿ ವಿಭಾಗ ಚಯರ್ಮಾನ್ : ಇಸ್ಮಾಯಿಲ್ ಸಅದಿ ಉರುಮನೆ, ಕನ್ವೀನರ್:  ಸೈಫುಲ್ಲಾ ಸಖಾಫಿ ಸಾಗರ;  ಖಲಂ ಪಬ್ಲೀಕೇಷನ್ ಚಯರ್ ಮಾನ್:  ಅಬ್ದುಲ್ ರಶೀದ್ ಕಾಮಿಲ್ ಸಖಾಫಿ ಮಜೂರು, ಕನ್ವೀನರ್ : ಮುತ್ತಲಿಬ್ ಸಖಾಫಿ ಸರಳಿಕಟ್ಟೆ. 
ಕಾರ್ಯಕ್ರಮದ ಪ್ರಾರಂಭದಲ್ಲಿ ಜೆಪ್ಪು ಅಬ್ದುರ್ರಹ್ಮಾನ್ ಮದನಿ ಸ್ವಾಗತಿಸಿ ಕೊನೆಯಲ್ಲಿ ರಶೀದ್ ಕಾಮಿಲ್ ಸಖಾಫಿ ವಂದಿಸಿದರು. ಉರುಮನೆ ಇಸ್ಮಾಯಿಲ್ ಸಅದಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News