ಮೋದಿ ಸುಳ್ಳುಗಾರ, ಅವರ ಮೂರೂವರೆ ವರ್ಷಗಳ ಆಡಳಿತ ಸಂಪೂರ್ಣ ವಿಫಲ: ರಾಜ್ ಠಾಕ್ರೆ

Update: 2017-09-22 14:20 GMT

ಹೊಸದಿಲ್ಲಿ, ಸೆ.22: ನರೇಂದ್ರ ಮೋದಿ ಸರಕಾರ ಆಡಳಿತದಲ್ಲಿ ಸಂಪೂರ್ಣ ವಿಫಲವಾಗಿದ್ದು, ತಾನು ಭ್ರಮನಿರಸನಗೊಂಡಿದ್ದೇನೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಹೇಳಿದ್ದಾರೆ.

2011ರಲ್ಲಿ ನರೇಂದ್ರ ಮೋದಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ರಾಜ್ ಠಾಕ್ರೆ ಗುಜರಾತ್ ಗೆ ಭೇಟಿ ನೀಡಿದ್ದರು. ಆ ಸಂದರ್ಭ ಮೋದಿಯವರ ಅಭಿವೃದ್ಧಿ ಕಾರ್ಯಗಳನ್ನು ಗುಣಗಾನ ಮಾಡಿದ್ದ ಠಾಕ್ರೆ, ಮೋದಿ ಭಾರತದ ಪ್ರಧಾನಮಂತ್ರಿಯಾಗಲು ಅರ್ಹರು ಎಂದಿದ್ದರು.

ತಮ್ಮ ಫೇಸ್ಬುಕ್ ಪೇಜ್ ಅನ್ನು ಲಾಂಚ್ ಮಾಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೋದಿ ಸುಳ್ಳುಗಾರ, ಅವರ ಮೂರೂವರೆ ವರ್ಷಗಳ ಆಡಳಿತ ಸಂಪೂರ್ಣ ವಿಫಲವಾಗಿದೆ ಎಂದು ಹೇಳಿದರು.

“ನಾವು ನಿಮ್ಮನ್ನು ಪ್ರೀತಿಸಿದ್ದೆವು. ಭಾರೀ ಫಲಿತಾಂಶವನ್ನೂ ನಿಮಗೆ ನೀಡಿದ್ದೆವು. ನೀವೇನಾದರೂ ಮಾಡುತ್ತೀರಿ ಎಂದುಕೊಂಡಿದ್ದೆವು. ಆದರೆ ನಮಗೆ ಭಾಷಣ ಮಾತ್ರ ಸಿಕ್ಕಿದೆಯೇ ಹೊರತು ಫಲಿತಾಂಶವಲ್ಲ” ಠಾಕ್ರೆ ಹೇಳಿದರು.

“ಈ ಸರಕಾರ ನೋಟಿನ ಬಣ್ಣ ಬದಲಾಯಿಸಿದನ್ನು ಹೊರತುಪಡಿಸಿ ಬಿಜೆಪಿ ಹಾಗೂ ಕಾಂಗ್ರೆಸ್ ಸರಕಾರದ ನಡುವೆ ಇರುವ ವ್ಯತ್ಯಾಸಗಳೇನು: ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News