ಗಾಂಜಾ ಸೇವನೆ: ಓರ್ವನ ಬಂಧನ
Update: 2017-09-22 15:30 GMT
ಮಣಿಪಾಲ, ಸೆ.22: ಅಲೆವೂರು ಗ್ರಾಮದ ಜೋಡುರಸ್ತೆ ಬಳಿ ಗಾಂಜಾ ಸೇವನೆ ಮಾಡುತ್ತಿದ್ದ ಓರ್ವನನ್ನು ಉಡುಪಿ ಡಿಸಿಐಬಿ ಪೊಲೀಸರು ಸೆ.21ರಂದು ಬಂಧಿಸಿದ್ದಾರೆ.
ಅಲೆವೂರು ಜೋಡುರಸ್ತೆ ನಿವಾಸಿ ಗುರುಪ್ರಸಾದ್ ಶೆಟ್ಟಿ ಯಾನೆ ಗುರು(28) ಬಂಧಿತ ಆರೋಪಿ. ಗಾಂಜಾ ಸೇವನೆ ಮಾಡುತ್ತಿದ್ದ ಈತನನ್ನು ವಶಪಡೆದು ಕೊಂಡ ಪೊಲೀಸರು, ಬಳಿಕ ಮಣಿಪಾಲ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಒಳಪಡಿಸಿದರು. ಇದರಲ್ಲಿ ಆತ ಗಾಂಜಾ ಸೇವನೆ ಮಾಡಿರುವುದು ದೃಢ ಪಟ್ಟಿದ್ದು, ಅದರಂತೆ ಆತನನ್ನು ಬಂಧಿಸಿ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.