×
Ad

​ವಿಷಜಂತು ಕಡಿತ: ಓರ್ವ ಮೃತ್ಯು

Update: 2017-09-24 21:12 IST

ಶಿರ್ವ, ಸೆ.24: ಕುತ್ಯಾರು ಎಂಬಲ್ಲಿ ವಿಷ ಜಂತು ಕಡಿತಕ್ಕೆ ಒಳಗಾದ ವ್ಯಕ್ತಿಯೊ ಬ್ಬರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಕುತ್ಯಾರು ತಂದೂರು ನಿವಾಸಿ ಕರಿಯ ಪೂಜಾರಿ(75) ಎಂದು ಗುರುತಿಸಲಾಗಿದೆ. ಇವರು  ಮನೆಯ ಬಳಿ ಹೂ ಕೊಯ್ಯು ತ್ತಿರುವಾಗ ಆಕಸ್ಮಿಕವಾಗಿ ವಿಷ ಜಂತು ಅವರ ಕಾಲಿಗೆ ಕಚ್ಚಿತ್ತೆನ್ನಲಾಗಿದೆ. ಇದ ರಿಂದ ಅಸ್ವಸ್ಥಗೊಂಡು ಮಂಗಳೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಸೆ.23ರಂದು ಮಧ್ಯಾಹ್ನ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News