×
Ad

ಕಕ್ಯಪದವು: ಎನ್ನೆಸ್ಸೆಸ್ ದಿನಾಚರಣೆ

Update: 2017-09-25 20:01 IST

ಬಂಟ್ವಾಳ, ಸೆ. 25: ಎಲ್.ಸಿ. ಇಂಡಿಯನ್ ಪದವಿ ಪೂರ್ವ ಕಾಲೇಜು ವಿಭಾಗದ ರಾಷ್ಟ್ರೀಯ ಸೇವಾ ಯೋಜನಾ  ಘಟಕದ  ರಾಷ್ಟ್ರೀಯ ಸೇವಾ ಯೋಜನೆಯ ದಿನಾಚರಣೆಯ ಅಂಗವಾಗಿ ಪ್ರ.ಶಿಕ್ಷಣ ಕಾರ್ಯಕ್ರಮದೊಂದಿಗೆ ಎನ್ನೆಸ್ಸೆಸ್ ದಿನಾಚರಣೆ ಎಲ್.ಆರ್.ಇಂಡಿಯನ್ ವಿದ್ಯಾಸಂಸ್ಥೆ ಕಕ್ಯಪದವಿನಲ್ಲಿ ಇತ್ತೀಚೆಗೆ ಜರಗಿತು.

ಮಡಂತ್ಯಾರು ಸೇಕ್ರೆಟ್ ಹಾರ್ಟ್ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಜೋಸೆಫ್ ಎನ್.ಎಂ. ರಾಷ್ಟ್ರೀಯ ಸೇವಾ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಪ್ರಾಂಶುಪಾಲ ಪ್ರವೀಣ್ ಎ.ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥ ಶಿವರಾಜ್ ಗಟ್ಟಿ, ಕಲಾ ವಿಭಾಗದ ಮುಖ್ಯಸ್ಥೆ ವಿಂದ್ಯಾಶ್ರೀ ಹಾಗೂ ಘಟಕದ ನಾಯಕ ಬಿ.ಮಿಥುನ್ ಕುಮಾರ್, ನಾಯಕಿ ರೋಶಲ್ ಸವಿತಾ ಉಪಸ್ಥಿತರಿದ್ದರು.
ಉಪನ್ಯಾಸಕಿ ಸೌಮ್ಯ ಎನ್.ವಂದಿಸಿ ಉಪನ್ಯಾಸಕಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News