ಕಾಪು : ಸ್ಕೂಟಿ ಅಪಘಾತ - ಮೂವರಿಗೆ ಗಾಯ
Update: 2017-09-25 16:07 GMT
ಕಾಪು, ಸೆ.25: ಕೈಪುಂಜಾಲು ಬಳಿ ಸೆ.24ರಂದು ಅಪರಾಹ್ನದ ವೇಳೆ ಸ್ಕೂಟಿ ಯೊಂದು ಪಲ್ಟಿಯಾದ ಪರಿಣಾಮ ಮೂವರು ಸವಾರರು ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ.
ಗಾಯಗೊಂಡವರನ್ನು ಸ್ಕೂಟಿ ಸವಾರ ಮಂಜುನಾಥ್, ಸಹಸವಾರರಾದ ಶಿರಸಿ ಮೂಲದ ಅಲೆವೂರು ಮಂಚಿ ನಿವಾಸಿ ವಿಷ್ಣು ನಾಗರಾಜ್ ಮಣ್ಣುರ್, ಚಂದ್ರು ಮುನಿಷಪ್ಪ ಅಂಗರಕಟ್ಟಿ ಎಂದು ಗುರುತಿಸಲಾಗಿದೆ. ಇವರು ಅಲೆವೂರಿ ನಿಂದ ಕಾಪು ಬೀಚ್ಗೆ ಹೋಗುವಾಗ ಈ ಅಪಘಾತ ಸಂಭವಿಸಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.