ಕುಂದಾಪುರ : ಹಾವು ಕಚ್ಚಿ ಮಹಿಳೆ ಮೃತ್ಯು

Update: 2017-09-25 16:08 GMT

ಕುಂದಾಪುರ, ಸೆ.25: ಹುಲ್ಲು ಕೊಯ್ಯುತ್ತಿರುವ ವೇಳೆ ನಾಗರಹಾವು ಕಚ್ಚಿದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಸೆ.24ರಂದು ಅಪರಾಹ್ನ ವೇಳೆ ಗುಲ್ವಾಡಿ ಗುಡಾರಹಕ್ಲು ಎಂಬಲ್ಲಿ ನಡೆದಿದೆ.

 ಗುಡಾರಹಕ್ಲು ನಿವಾಸಿ ಹೆರಿಯ ಪೂಜಾರಿ ಎಂಬವರ ಪತ್ನಿ ಶೇಷಿ ಪೂಜಾರ್ತಿ (70) ಮೃತ ಮಹಿಳೆ. ಇವರು ಮನೆಯ ಬಳಿ ಹುಲ್ಲು ಕೊಯ್ಯುತ್ತಿರುವ ವೇಳೆ ನಾಗರಹಾವು ಕೈಗೆ ಕಚ್ಚಿತ್ತೆನ್ನಲಾಗಿದೆ. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಅವರು ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News