ಜುಗಾರಿ ಅಡ್ಡೆಗೆ ದಾಳಿ: ಐವರ ಬಂಧನ

Update: 2017-09-25 16:09 GMT

ಶಿರ್ವ, ಸೆ.25: ಶಿರ್ವದ ತುಪ್ಪೆಪಾದೆ ಎಂಬಲ್ಲಿ ಸೆ.24ರಂದು ಅಪರಾಹ್ನ ವೇಳೆ ಇಸ್ಪೀಟ್ ಜುಗಾರಿ ಆಡುತ್ತಿದ್ದ ಐದು ಮಂದಿಯನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.

ತುಪ್ಪೆಪಾದೆಯ ಪರಮಶಿವ(59), ಸರವಣ್(27), ಕುಮಾರ್(20), ರವಿ (32), ಗಣೇಶ್(28) ಬಂಧಿತ ಆರೋಪಿಗಳು. ತುಪ್ಪೆಪಾದೆಯ ವೆಂಕಟೇಶ್ (45), ಕೃಷ್ಣ(27), ಕರ್ಣ(24), ರವಿ(48), ಸುಬ್ಬ(25) ಎಂಬವರು ಪರಾರಿ ಯಾಗಿದ್ದಾರೆ. ಬಂಧಿತರಿಂದ 2,550ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News