ಕಾಸರಗೋಡು ಲೋಕಸೇವಾ ಕಚೇರಿಗೆ ಮುತ್ತಿಗೆ ಹಾಕಿದ ಡಿ ವೈ ಎಫ್ ಐ

Update: 2017-09-25 17:05 GMT

ಕಾಸರಗೋಡು ,ಸೆ.25:  ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು  ಡಿ ವೈ ಎಫ್ ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಸೋಮವಾರ ಕಾಸರಗೋಡು ಲೋಕಸೇವಾ ಕಚೇರಿ ( ಪಿ ಎಸ್ ಸಿ ) ಗೆ ಮುತ್ತಿಗೆ ಹಾಕಲಾಯಿತು.

ಸರಕಾರಿ ಕಚೇರಿಗಳಲ್ಲಿ ತೆರವಾಗಿರುವ  ಹುದ್ದೆಗಳನ್ನು  ಕೂಡಲೇ ಭರ್ತಿಗೊಳಿಸಬೇಕು , ಖಾಲಿ ಹುದ್ದೆಗಳ ಬಗ್ಗೆ  ಆಗಾಗ  ವರದಿ ಸಲ್ಲಿಸಬೇಕು ,  ಅಡ್ವಾನ್ಸ್  ಮೆಮೋ ಲಭಿಸಿದ ಎಲ್ಲಾ   ಉದ್ಯೋಗಾರ್ಥಿಗಳಿಗೆ ನೇಮಕಾತಿ ನೀಡಬೇಕು  ಮೊದಲಾದ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನು  ಮಾಜಿ ಶಾಸಕ ಹಾಗೂ ಸಿಪಿಎಂ ಜಿಲ್ಲಾ  ಸಮಿತಿ  ಸದಸ್ಯ  ಕೆ. ವಿ  ಕುಞರಾಮನ್  ಉದ್ಘಾಟಿಸಿದರು .ಟಿ . ಕೆ ಮನೋಜ್  ಅಧ್ಯಕ್ಷತೆ ವಹಿಸಿದ್ದರು.

ಡಿ ವೈ ಎಫ್ ಐ ಜಿಲ್ಲಾ ಕಾರ್ಯದರ್ಶಿ  ಕೆ. ಮಣಿಕಂಠನ್ , ಪಿ . ಶಿವಪ್ರಸಾದ್ ,  ಟಿ .ಕೆ ಮನೋಜ್ , ಕೆ . ಜಯನ್,  ಮೀರಾಚಂದ್ರನ್ , ಕೆ . ರಾಜು ,  ನಾಸರುದ್ದೀನ್ ಮೇಲಂಗರ ಮೊದಾಲದವರು ನೇತೃತ್ವ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News