ಬಸ್ ಪರ್ಮಿಟ್ ಮಂಜೂರಾತಿಗೆ ಆಕ್ಷೇಪಣೆ ಆಹ್ವಾನ

Update: 2017-09-25 17:16 GMT

ಮಂಗಳೂರು, ಸೆ.25: ಕೆಎಸ್ಸಾರ್ಟಿಸಿ ಮಂಗಳೂರು ಬಸ್ ನಿಲ್ದಾಣದಿಂದ ಮೂಡುಬಿದಿರೆ, ಕಾರ್ಕಳ ಮಾರ್ಗದಲ್ಲಿ 16 ಬಸ್ ಗಳ ಸಂಚಾರಕ್ಕಾಗಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರವು ರಹದಾರಿ ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದೆ. ಈ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಅ.9ರೊಳಗೆ ಕಾರ್ಯದರ್ಶಿ, ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಹಾಗೂ ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮಂಗಳೂರು ಇವರಿಗೆ ಸಲ್ಲಿಸಲು ಆರ್‌ಟಿಒ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News