ಆಧಾರ್: ಅಂತಿಮ ದಿನಾಂಕ ವಿಸ್ತರಣೆ

Update: 2017-09-28 15:18 GMT

   ಹೊಸದಿಲ್ಲಿ, ಸೆ.28: ಸರಕಾರದ ಯೋಜನೆ ಹಾಗೂ ಸಬ್ಸಿಡಿಗಳ ಪ್ರಯೋಜನ ಗಳಿಸಲು ಆಧಾರ್ ಕಾರ್ಡ್ ಪಡೆಯುವ ಅಂತಿಮ ದಿನಾಂಕವನ್ನು ಡಿ.31ರವರೆಗೆ ವಿಸ್ತರಿಸಲಾಗಿದೆ.

 ಆಧಾರ್ ಕಾರ್ಡ್‌ಗೆ ಇನ್ನೂ ಅರ್ಜಿ ಹಾಕದವರಿಗೆ ಮಾತ್ರ ಈ ಅವಕಾಶ ಲಭ್ಯವಾಗಲಿದೆ ಎಂದು ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ. ಬಡ ಮಹಿಳೆಯರಿಗೆ ಉಚಿತ ಅಡುಗೆ ಅನಿಲ, ಸೀಮೆಎಣ್ಣೆ, ರಸಗೊಬ್ಬರ ಸಬ್ಸಿಡಿ, ಉದ್ಯೋಗ ಖಾತರಿ ಯೋಜನೆ ಸೇರಿದಂತೆ ಒಟ್ಟು 135 ಯೋಜನೆಗಳ ಪ್ರಯೋಜನ ಪಡೆಯಲು ಆಧಾರ್ ನಂಬರ್ ಕಡ್ಡಾಯಗೊಳಿಸಲಾಗಿದೆ.

ಸರಕಾರದ ಅಭಿವೃದ್ಧಿ ಯೋಜನೆಗಳ ಪರಾಮರ್ಶೆ ನಡೆಸಿದ ಬಳಿಕ ಈ ಯೋಜನೆಗಳ ಪ್ರಯೋಜನ ಎಲ್ಲಾ ಅರ್ಹ ಫಲಾನುಭವಿಗಳಿಗೂ ತಲುಪಬೇಕೆಂಬ ಉದ್ದೇಶದಿಂದ ಆಧಾರ್ ಕಾರ್ಡ್ ಪಡೆಯುವ ಅಂತಿಮ ದಿನಾಂಕವನ್ನು ಡಿ.31ರವರೆಗೆ ವಿಸ್ತರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News