×
Ad

​ದೋಣಿ ರಾಟೆ ಬಡಿದು ಮೃತ್ಯು

Update: 2017-09-28 22:04 IST

ಗಂಗೊಳ್ಳಿ, ಸೆ.28: ದೋಣಿ ರಾಟೆ ಬಡಿದು ಮೀನುಗಾರರೊಬ್ಬರು ಮೃತ ಪಟ್ಟ ಘಟನೆ ಸೆ.27ರಂದು ಮರವಂತೆ ಬ್ರೇಕ್ ವಾಟರ್ ಬಳಿ ನಡೆದಿದೆ.
 ಮೃತರನ್ನು ಮರವಂತೆ ಗ್ರಾಮದ ನರಸಿಂಹ(49) ಎಂದು ಗುರುತಿಸಲಾಗಿದೆ.

ಸಮುದ್ರದಲ್ಲಿ ಮೀನುಗಾರಿಕೆ ಮುಗಿಸಿ ಬಂದು ದೋಣಿಯನ್ನು ಮರವಂತೆ ಬ್ರೇಕ್ ವಾಟರ್ ಬಳಿಯ ದಡಕ್ಕೆ ತರಲು ರಾಟೆ ಹಾಕಿ ಎಳೆಯುತ್ತಿದ್ದಾಗ ದೋಣಿಯ ರಾಟೆ ಮತ್ತು ಹಗ್ಗ ತುಂಡಾಗಿ ನರಸಿಂಹ ಅವರಿಗೆ ಬಡಿಯಿತೆನ್ನಲಾಗಿದೆ. ಇದರಿಂದ ತೀವ್ರ ಗಾಯಗೊಂಡು ಅವರು ಮೃತಪಟ್ಟರು. ಅಲ್ಲೇ ಇದ್ದ ಶಾರದಾ ಮೊಗವೀರ ಎಂಬವರ ಕಾಲಿಗೆ ಗಾಯವಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News