ಕೆ.ಎಸ್. ನಿಸಾರ್ ಅಹ್ಮದ್‌ರಿಗೆ ‘ಕಾರಂತ ಪುರಸ್ಕಾರ’

Update: 2017-09-28 16:38 GMT

ಮಂಗಳೂರು, ಸೆ.28: ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಪ್ರಾಧ್ಯಾಪಕ, ವಿಮರ್ಶಕ, ವೈಚಾರಿಕ ಬರಹಗಾರ ಹಾಗೂ ಮೈಸೂರು ದಸರಾ ಉತ್ಸವವನ್ನು ಉದ್ಘಾಟಿಸಿದ ನಿತ್ಯೋತ್ಸವ ಕವಿ, ಹಿರಿಯ ಸಾಹಿತಿ, ನಾಡೋಜ ಪ್ರೊ. ಕೆ.ಎಸ್.ನಿಸಾರ್ ಅಹ್ಮದ್‌ರಿಗೆ ಪ್ರತಿಷ್ಠಿತ ‘ಕಾರಂತ ಪುರಸ್ಕಾರ’ ಲಭಿಸಿದೆ.

ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕಲ್ಕೂರ ಪ್ರತಿಷ್ಠಾನದ ಸಹಯೋಗದಲ್ಲಿ ಅ.10ರಂದು ಸಂಜೆ 4ಕ್ಕೆ ನಗರದ ಪುರಭವನದಲ್ಲಿ ಜರಗಲಿರುವ ಡಾ. ಕೋಟ ಶಿವರಾಮ ಕಾರಂತರ 116ನೆಯ ಹುಟ್ಟುಹಬ್ಬ ಆಚರಣೆಯ ಕಾರ್ಯಕ್ರಮದಲ್ಲಿ ಈ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News