ಕೆಲಸಕ್ಕೆ ಹೋಗು ಎಂದ ಅಪ್ಪ: ಅಟ್ಟಾಡಿಸಿ ಹೊಡೆದ ಮಗ!
Update: 2017-09-28 17:15 GMT
ಮೂಡುಬಿದಿರೆ, ಸೆ. 28: ಕೆಲಸಕ್ಕೆ ಹೋಗಲು ಆಗುವುದಿಲ್ಲವಾ ? ಎಂದು ಮಗನನ್ನು ಪ್ರಶ್ನಿಸಿದ ತಂದೆಯೋರ್ವರು ಮಗನಿಂದ ಹಲ್ಲೆಗೊಳಗಾದ ಘಟನೆ ಪಾಲಡ್ಕ ಗ್ರಾಮದಲ್ಲಿ ನಡೆದಿದ್ದು, ಈ ಕುರಿತು ಪ್ರಕರಣ ದಾಖಲಾಗಿದೆ.
ಪಾಲಡ್ಕ ಗ್ರಾಮದ ವರ್ಣಬೆಟ್ಟು ನೇರೋಲ್ ಪಲ್ಕೆ ನಿವಾಸಿ ವೆಂಕಪ್ಪ ಮೇರಾ ಮಗನ ಕೈಯಿಂದ ಹಲ್ಲೆಗೊಳಗಾದವರು. ಇವರ ಮಗ ಉಮೇಶ್ ಎಂಬಾತ ಹಲ್ಲೆ ನಡೆಸಿದ ಆರೋಪಿ. ಮನೆಗೆ ಬಂದ ಉಮೇಶನನ್ನು ಉದ್ದೇಶಿಸಿ ದಿನವಿಡೀ ತಿರುಗಾಡುವ ಬದಲು ನಿನಗೆ ದುಡಿಯಲು ಆಗುವುದಿಲ್ಲವಾ ಎಂದು ಪ್ರಶ್ನಿಸಿದ್ದರೆನ್ನಲಾಗಿದೆ. ತಂದೆ ತನ್ನನ್ನು ಕೆಲಸಕ್ಕೆ ಹೋಗಲು ಹೇಳಿದ್ದಾರೆ ಎಂದು ಕುಪಿತನಾದ ಉಮೇಶ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿ, ಕೊಲೆ ಬೆದರಿಕೆ ಒಡ್ಡಿದ್ದಾನೆ ಎಂದು ತಂದೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.