ಆ್ಯಂಬುಲೆನ್ಸ್ ಢಿಕ್ಕಿ: ಪಾದಚಾರಿ ಮೃತ್ಯು

Update: 2017-10-01 15:27 GMT

ಮಂಗಳೂರು, ಅ. 1: ಸುರತ್ಕಲ್‌ನ ತಡಂಬೈಲ್ ಬಳಿ ರವಿವಾರ ಓಮ್ನಿ ಆ್ಯಂಬುಲೆನ್ಸ್ ಢಿಕ್ಕಿಯಾಗಿ ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಎನ್‌ಐಟಿಕೆ ಗಾರ್ಡನ್ ವಿಭಾಗದ ಉದ್ಯೋಗಿ ತಡಂಬೈಲ್ ನಿವಾಸಿ ತಿಲಕ್ ಶೆಟ್ಟಿಗಾರ್ (55) ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಈ ಬಗ್ಗೆ ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News