ಎಸ್.ಡಿ.ಪಿ.ಐ. ಅರ್ಕುಳ: ಬಡ ಕುಟುಂಬಕ್ಕೆ ಮನೆ ಹಸ್ತಾಂತರ
Update: 2017-10-01 15:44 GMT
ಫರಂಗಿಪೇಟೆ, ಅ.1: ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಆರ್ಕುಳ ವಲಯದ ವತಿಯಿಂದ ಅಡ್ಯಾರ್ ಪಂಚಾಯತ್ ಸದಸ್ಯ ಯಾಸೀನ್ ಅರ್ಕುಳ ಇವರ ನೇತೃತ್ವದಲ್ಲಿ ವಳಚ್ಚಿಲ್ ನಲ್ಲಿ ದಾನಿಗಳ ನೆರವಿನಿಂದ ನಿರ್ಮಿಸಿದ, ಮನೆಯನ್ನು ಬಡ ಕುಟುಂಬಕ್ಕೆ ಹಸ್ತಾಂತರ ನಡೆಸಲಾಯಿತು.
ಈ ಸಂದರ್ಭದಲ್ಲಿ ವಳಚ್ಚಿಲ್ ಬದ್ರಿಯಾ ಮಸೀದಿ ಮುದರಿಸ್ ಹನೀಫ್ ಸಅದಿ, ಎಸ್.ಡಿ.ಪಿ.ಐ ಉತ್ತರ ವಿಧಾನಸಭಾ ಕ್ಷೇತದ ಉಪಾಧ್ಯಕ್ಷ ಹನೀಫ್ ಕಾವೂರು, ಅಡ್ಯಾರ್ ಗ್ರಾಮ ಪಂಚಾಯತ್ ಸದಸ್ಯ ಸಮೀರ್ ಶಾನ್, ಮಸೀದಿ ಆಡಳಿತ ಸಮಿತಿ ಗೌರಾವಾಧ್ಯಕ್ಷ ಕಾಸಿಮ್, ಸ್ಥಳೀಯ ಮುಖಂಡರಾದ ಅಲಂಕಾರ್ ಮೊನಾಕ, ಅಬೂಬಕರ್ ಮತ್ತಿತರರು ಉಪಸ್ಥಿತರಿದ್ದರು.