×
Ad

ಕಾರು ಅಪಘಾತ: ಎಂಟು ಮಂದಿಗೆ ಗಾಯ

Update: 2017-10-02 22:29 IST

ಶಂಕರನಾರಾಯಣ, ಅ.2: ಅಂಪಾರು ಮಹಿಷಮರ್ದಿನಿ ಸಭಾಭವನದ ಎದುರು ಅ.1ರಂದು ಅಪರಾಹ್ನ ಎರಡು ಕಾರುಗಳ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಎಂಟು ಮಂದಿ ಗಾಯಗೊಂಡಿದ್ದಾರೆ.

ಶಂಕರನಾರಾಯಣ ಕಡೆಯಿಂದ ಅಂಪಾರು ಕಡೆಗೆ ಹೋಗುತ್ತಿದ್ದ ಬೆಂಗಳೂರಿನ ಪುರುಷೋತ್ತಮ ಅವರ ಕಾರಿಗೆ ಎದುರಿನಿಂದ ಬಂದ ಕಾರು ಢಿಕ್ಕಿ ಹೊಡೆಯಿತು. ಇದರಿಂದ ಪುರುಷೋತ್ತಮ, ಅವರ ಕಾರಿನ ಚಾಲಕ ಕೃಷ್ಣಮೂರ್ತಿ, ಅವರ ತಾಯಿ ಮುನಿಯಮ್ಮ, ರೂಪಾ, ಮೈನಾಶ್ರೀ ಗಾಯ ಗೊಂಡಿದ್ದಾರೆ.

ಇನ್ನೊಂದು ಕಾರಿನಲ್ಲಿದ್ದ ಮೂವರು ಗಾಯಗೊಂಡಿರುವ ಬಗ್ಗೆ ತಿಳಿದುಬಂದಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News