ಗಾಂಧಿ ಜಯಂತಿ ಅಂಗವಾಗಿ ಸ್ವಚ್ಚತಾ ಅಭಿಯಾನ

Update: 2017-10-02 17:30 GMT

ಪುತ್ತೂರು, ಅ. 2: ಗಾಂಧಿ ಜಯಂತಿ ಅಂಗವಾಗಿ ರೋಟರಿ ಸಂಸ್ಥೆಯ ವತಿಯಿಂದ ರೋಟರಿ ಪುತ್ತೂರು ಅಭಿಯಾನ ಯೋಜನೆಯಡಿಯಲ್ಲಿ ‘ನಮ್ಮ ಕಸ ನಮ್ಮ ಜವಾಬ್ದಾರಿ’ ಸ್ವಚ್ಚತಾ ಜಾಗೃತಿ ಅಭಿಯಾನ ಸೋಮವಾರ ಪುತ್ತೂರಿನಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಉಪನ್ಯಾಸಕ ರಾಜೇಶ್ ಬಿಜ್ಜಂಗಳ ಅವರು ಕಸ ಎಂಬುದು ದೊಡ್ಡ ಸಂಗತಿಯಲ್ಲ ಆದರೆ ಅದರಿಂದ ಆಗುತ್ತಿರುವ ಅಪಾಯಗಳು ಮಾತ್ರ ಬಹಳ ದೊಡ್ಡದು. ಅಲ್ಲಲ್ಲಿ ಕಸವನ್ನು ಕಂಡಲ್ಲಿ ಎಸೆಯದೆ ನಮ್ಮ ಕಸವನ್ನು ನಾವೇ ವಿಲೇವಾರಿ ಮಾಡುವ ಮನೋಪ್ರವೃತ್ತಿ ಬೆಳೆಯಬೇಕು. ಪುತ್ತೂರಿನಲ್ಲಿ ಈ ನಿಟ್ಟಿನಲ್ಲಿ ಸಾಕಷ್ಟು ಜಾಗೃತಿಯಾಗಿದೆ. ವಿಲೇವಾರಿ ಪ್ರಜ್ಞೆ ಜನರಲ್ಲಿ ಮೂಡಿದೆ ಎಂದರು.

ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು ಅಭಿಯಾನದಲ್ಲಿ ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News