ಆತ್ಮಹತ್ಯೆ ಮಾಡಿಕೊಂಡ ನನ್ನ ಮಗಳನ್ನು ನಾನೊಬ್ಬಳೇ ಹುಡುಕುತ್ತೇನೆ: ದಿಲಾರ ಬೇಗಂ

Update: 2017-10-03 12:33 GMT

ನಾನು ನನ್ನ ಪುತ್ರಿಯನ್ನು ಹುಡುಕುತ್ತಿದ್ದೇನೆ. ಆಕೆ ನಾಪತ್ತೆಯಾಗಿ 15 ಗಂಟೆಗಳೇ ಕಳೆದಿವೆ. ಆದರೆ ಈ ಬಗ್ಗೆ ನಾನು ಯಾರಲ್ಲಿಯೂ ಹೇಳಿಲ್ಲ. ನನಗೆ ನನ್ನ ಮಗಳನ್ನು ಹುಡುಕಲು ಸಹಾಯ ಮಾಡುವ ಬದಲು ಅವರು ಏನೆಲ್ಲಾ ಕಥೆ ಕಟ್ಟುತ್ತಾರೆಂದು ನಿಮಗೆ ತಿಳಿದಿದೆ. ಅವರು ನನ್ನ ಹದಿಹರೆಯದ ಪುತ್ರಿಯ ಬಗ್ಗೆ ಏನೇನೆಲ್ಲಾ ಹೇಳಬಹುದು. ಕಳೆದ ವರ್ಷದ ಪ್ರವಾಹದ ಸಮಯ ಸಪ್ನಾ ವಿಚಾರದಲ್ಲೂ ಇದೇ ಆಗಿತ್ತು. ಸಪ್ನಾ ಕೇವಲ 12 ವರ್ಷದ ಬಾಲಕಿಯಾಗಿದ್ದಳು. ನೆರೆ ನೀರು ಇಳಿಯುತ್ತಿದ್ದಂತೆಯೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಕೆ ಹುಡುಗನೊಬ್ಬನೊಂದಿಗೆ ಓಡಿ ಹೋದಳೆಂದು ಗ್ರಾಮಸ್ಥರು ಹೇಳಿದ್ದರು. ಆದರೆ ಪ್ರತಿ ಬಾರಿ ನೆರೆ ನೀರು ಮನೆಯೊಳಗೆ ಪ್ರವೇಶಿಸಿದಾಗೆಲ್ಲಾ ಮಾನವ ಕಳ್ಳ ಸಾಗಾಟಗಾರರೂ ಪ್ರವೇಶಿಸುತ್ತಾರೆ. ಆಕೆಯನ್ನು ಇಂತಹ ಜನರೇ ಕೊಂಡು ಹೋಗಿದ್ದರು. ಆದರೆ ಆ ದುಷ್ಟ ಜನರಿಂದ ತಪ್ಪಿಸಿಕೊಂಡು ಆಕೆ ಹಿಂದಿರುಗಿದರೂ ಗ್ರಾಮಸ್ಥರು ಕಥೆ ಕಟ್ಟಿದ ಪರಿಣಾಮ ಆಕೆ ಆತ್ಮಹತ್ಯೆ ಮಾಡಿಕೊಂಡಳು. ನನ್ನ ಮಗಳಿಗೂ ಹೀಗೆಯೇ ಆಗುವುದು ನನಗೆ ಬೇಕಿಲ್ಲ. ಆಕೆಯನ್ನು ನಾನೊಬ್ಬಳೇ ಹುಡುಕುತ್ತೇನೆ. ನಾನು ನನ್ನ ಮನೆ, ದನ ಹಾಗೂ ಎಲ್ಲಾ ವಸ್ತುಗಳನ್ನೂ ಕಳೆದುಕೊಂಡಿದ್ದೇನೆ. ಏನೇ ಆದರೂ ನನ್ನ ಮಗಳು ಕೂಡ ಕಳೆದು ಹೋಗದಂತೆ ನಾನು ನೋಡಿಕೊಳ್ಳುತ್ತೇನೆ.

ದಿಲಾರ ಬೇಗಂ

Full View

Writer - ಜಿ ಎಂ ಬಿ ಆಕಾಶ್

contributor

Editor - ಜಿ ಎಂ ಬಿ ಆಕಾಶ್

contributor

Similar News