ಮೃತ ಝುಬೈರ್ ಮನೆಗೆ ಜಿಲ್ಲಾ ಖಾಝಿ ತ್ವಾಖಾ ಉಸ್ತಾದ್ ಭೇಟಿ

Update: 2017-10-08 15:17 GMT

ಉಳ್ಳಾಲ, ಅ.8: ಮುಕ್ಕಚೇರಿಯಲ್ಲಿ ಹತ್ಯೆಗೀಡಾದ ಮೃತ ಝುಬೈರ್ ಮನೆಗೆ ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಅಲ್ ಅಝ್ಹರಿ ಉಸ್ತಾದ್  ಭೇಟಿ ನೀಡಿ, ದುಆ ನೆರವೇರಿಸಿದರು.

ಈ ಸಂದರ್ಭದಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿ ಪ್ರಧಾನ ಕಾರ್ಯದರ್ಶಿ  ಮುಹಮ್ಮದ್ ಹನೀಫ್ ಹಾಜಿ, ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿ ಕೋಶಾಧಿ ಕಾರಿ  ಬಾಷಾ ತಂಙಳ್, ದಕ್ಷಿಣ ಕನ್ನಡ ಜಿಲ್ಲಾ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ  ಮೊಯ್ದಿನಬ್ಬ ಹಾಜಿ, ಮಂಗಳೂರು ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ರಿಯಾಝ್ ಬಂದರ್ ಹಾಗೂ ಇತರರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News