ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಸಂದೇಶ: ಓರ್ವನ ಬಂಧನ

Update: 2017-10-08 15:40 GMT

ಕೊಣಾಜೆ, ಅ. 8: ವಾಟ್ಸ್ ಆ್ಯಪ್ ಸ್ಟೇಟಸ್‌ನಲ್ಲಿ ಪ್ರಚೋದನಕಾರಿ ವೀಡಿಯೊ ಹಾಕಿ ಬೆದರಿಕೆಯೊಡ್ಡಿದ ವಿಷಯಕ್ಕೆ ಸಂಬಂಧಿಸಿ ಕೊಣಾಜೆ ಪೊಲೀಸರು ಓರ್ವನನ್ನು ಬಂಧಿಸಿರುವ ಘಟನೆ ನಡೆದಿದೆ.

ಪಜೀರು ಅಡ್ಕ ನಿವಾಸಿ ಮೋಹನ್ ಆಚಾರ್ಯ (30) ಬಂಧಿತ ಎಂದು ಗುರುತಿಸಲಾಗಿದೆ. ಮೋಹನ್ ಆಚಾರ್ಯ ತನ್ನ ವಾಟ್ಸ್ ಆ್ಯಪ್ ಸ್ಟೇಟಸ್‌ನಲ್ಲಿ ಕೇರಳ ಭಾಗದಲ್ಲಿ ಅಪ್ರಾಪ್ತೆ ಬಾಲಕಿಗೆ ಅತ್ಯಾಚಾರಗೈದ ಆರೋಪಿಯನ್ನು ಥಳಿಸಿ ಕೊಲೆಗೈದಿದ್ದಾರೆ ಎನ್ನಲಾದ ವೀಡಿಯೊ ಒಂದನ್ನು ಹಾಕಿ, ಇನ್ನು ಮುಂದೆ ಪಜೀರು ಸಮೀಪ ದನ ಕಳವು ನಡೆಸಿದವರಿಗೆ ಇದೇ ರೀತಿ ಥಳಿಸಿ ಕೊಲ್ಲಬೇಕು ಅನ್ನುವ ಬೆದರಿಕೆಯೊಡ್ಡಿರುವ ಸಂದೇಶವನ್ನು ಹಾಕಿದ್ದ ಎಂದು ದೂರಲಾಗಿತ್ತು. 
       

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News