​ಬಂದರ್ ದಕ್ಕೆಯಲ್ಲಿ ಮಲಗಿದ್ದಲ್ಲಿಯೇ ವ್ಯಕ್ತಿ ಮೃತ್ಯು

Update: 2017-10-12 17:44 GMT

ಮಂಗಳೂರು, ಅ.12: ಮೂರ್ಛೆರೋಗ ಹಾಗು ಸಕ್ಕರೆ ಕಾಯಿಲೆ ಬಳಲುತ್ತಿದ್ದ ವ್ಯಕ್ತಿಯೊಬ್ಬರು ನಗರದ ಬಂದರ್ ದಕ್ಕೆ ಸಮೀಪ ಮಲಗಿದ್ದಲ್ಲಿಯೇ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

ಕೊಣಾಜೆ ಸಮೀಪದ ಪಾವೂರು ನಿವಾಸಿ ಮುಹಮ್ಮದ್ ರಫೀಕ್ ಯಾನೆ ರಫೀಕ್ (52) ಮೃತರು ಎಂದು ಗುರುತಿಸಲಾಗಿದೆ. ಮೂರ್ಛೆ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಇವರು ಎರಡು ತಿಂಗಳ ಹಿಂದೆ ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಬಂದರ್ ದಕ್ಷಿಣ ದಕ್ಕೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಇವರು ಗುರುವಾರ ಬೆಳಗ್ಗೆ ದಕ್ಕೆಯ ದಂಡೆಯ ಮೇಲೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಮೃತದೇಹವನ್ನು ಮಹಜರು ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News