×
Ad

ನಾಪತ್ತೆಯಾದ ವ್ಯಕ್ತಿಯ ಮೃತದೇಹ ಪತ್ತೆ

Update: 2017-10-17 23:07 IST

ಬ್ರಹ್ಮಾವರ, ಅ.17: ಹೊಳೆಯಲ್ಲಿ ಮೀನುಗಾರಿಕೆಗೆ ನಡೆಸಲು ದೋಣಿಯಲ್ಲಿ ಹೋಗಿ ನಾಪತ್ತೆಯಾಗಿದ್ದ ಹೊಸಾಳ ಗ್ರಾಮದ ಭಾಸ್ಕರ ಬಂಗೇರ(39) ಎಂಬ ವರ ಮೃತದೇಹವು ಕಚ್ಚೂರು ಗ್ರಾಮದ ಬೆಣ್ಣೆಕುದ್ರು ಸಂಪರ್ಕ ಸೇತುವೆ ಬಳಿಯ ನದಿಯ ತೀರದಲ್ಲಿ ಅ.16ರಂದು ಪತ್ತೆಯಾಗಿದೆ.

 ಅ.14ರಂದು ರಾತ್ರಿ 8ಗಂಟೆೆ ಸುಮಾರಿಗೆ ಬಾರಕೂರಿನ ರಮಾನಂದ ಕರ್ಕೆರ ಎಂಬವರ ದೋಣಿಯಲ್ಲಿ ಮೀನುಗಾರಿಕೆಗೆಂದು ಹೋಗಿದ್ದ ಭಾಸ್ಕರ ಬಂಗೇರ ಮೀನು ಹಿಡಿಯುವಾಗ ದೋಣಿಯಿಂದ ಆಕಸ್ಮಿಕ ನೀರಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತ ಪಟ್ಟಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News