ನೋಟ್ ಬ್ಯಾನ್ ನಡೆಯನ್ನು ಬೆಂಬಲಿಸಿದ್ದಕ್ಕಾಗಿ ಜನರೊಂದಿಗೆ ಕ್ಷಮೆಯಾಚಿಸಿದ ಕಮಲ್ ಹಾಸನ್

Update: 2017-10-18 07:56 GMT

ಹೊಸದಿಲ್ಲಿ, ಅ.18: ಪ್ರಧಾನಿ ನರೇಂದ್ರ ಮೋದಿಯವರ ನೋಟು ಅಮಾನ್ಯ ಕ್ರಮವನ್ನು ತರಾತುರಿಯಲ್ಲಿ ಬೆಂಬಲಿಸಿದ್ದಕ್ಕಾಗಿ ನಟ, ನಿರ್ದೇಶಕ ಕಮಲ್ ಹಾಸನ್ ಜನತೆಯಲ್ಲಿ ಕ್ಷಮೆ ಯಾಚಿಸಿದ್ದಾರೆ.

ತಮಿಳು ಮ್ಯಾಗಝಿನ್ ‘ವಿಕಟನ್’ನ ಅಂಕಣವೊಂದರಲ್ಲಿ ಅವರು ಕ್ಷಮೆಯಾಚಿಸಿದ್ದಾರೆ ಎಂದು News Minute ವರದಿ ಮಾಡಿದೆ.  ಯಾವುದೇ ಪಕ್ಷದೊಂದಿಗೆ ಕೈ ಜೋಡಿಸಲು ಹಿಂಜರಿಯುವುದಿಲ್ಲ ಎಂದು ಕಮಲ್ ಹೇಳಿಕೆ ನೀಡಿದ್ದ ಒಂದು ತಿಂಗಳ ನಂತರ ಈ ರೀತಿ ಕ್ಷಮೆ ಯಾಚಿಸಿದ್ದಾರೆ.

“ತರಾತುರಿಯಲ್ಲಿ ಯೋಜನೆಯನ್ನು ಬೆಂಬಲಿಸಿದ್ದಕ್ಕಾಗಿ ಜನರಲ್ಲಿ ಕ್ಷಮೆ ಯಾಚಿಸಲು ನಾನು  ಬದ್ಧನಾಗಿರುತ್ತೇನೆ” ಎಂದವರು ಹೇಳಿದ್ದಾರೆ.

2016ರ ನವೆಂಬರ್ 9ರಂದು ಟ್ವೀಟ್ ಮಾಡಿದ್ದ ಕಮಲ್ ಹಾಸನ್, “ಮೋದಿಯವರಿಗೆ ಸೆಲ್ಯೂಟ್. ರಾಜಕೀಯವನ್ನು ಮೀರಿ ಈ ನಡೆಯನ್ನು ಎಲ್ಲರೂ ಸ್ವಾಗತಿಸಬೇಕು” ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News