ಕುಡ್ಪಾಡಿ: ಸಾರ್ವಜನಿಕರ ಅಹವಾಲು ಸ್ವೀಕಾರ

Update: 2017-10-18 12:37 GMT

ಮಂಗಳೂರು, ಅ.18: ನಗರದ ಜೆಪ್ಪು ಕುಡ್ಪಾಡಿ ಮಸೀದಿ ಬಳಿ ರಸ್ತೆ ವಿಸ್ತರಣೆ ಬಗ್ಗೆ ಶಾಸಕ ಜೆ.ಆರ್.ಲೋಬೊ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಾರ್ವ ಜನಿಕರ ಅಹವಾಲು ಸ್ವೀಕರಿಸಿ ದರು.

ಬಳಿಕ ಮಾತನಾಡಿದ ಅವರು ರಸ್ತೆ ಅಗಲೀಕರಣಕ್ಕೆ ಸಾರ್ವಜನಿಕರ ಸಹಕಾರ ನೀಡಬೇಕು ಎಂದು ಕರೆ ನೀಡಿದರು. ಈ ರಸ್ತೆ ಅಗಲೀಕರಣದ ವ್ಯಾಪ್ತಿಯನ್ನು 20 ಫೀಟ್‌ಗೆ ಇಳಿಸುವಂತೆ ಸಾರ್ವಜನಿಕರ ಮನವಿ ಸ್ಪಂದಿಸಿದ ಶಾಸಕರು, ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳಲು ಸೂಚಿಸಿದರು.

ಈ ಸಂದರ್ಭ ಕಾರ್ಪೊರೇಟರ್‌ಗಳಾದ ಅಪ್ಪಿ, ಶೈಲಜಾ, ಆಶ್ರಯ ಸಮಿತಿಯ ಸದಸ್ಯರಾದ ಮುಹಮ್ಮದ್ ನವಾಝ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News