ಕಾಪು: ಪಟಾಕಿ ಮಾರಾಟಗಾರರ ತೆರವು

Update: 2017-10-18 16:57 GMT

ಕಾಪು, ಅ. 18: ಕಾಪುವಿನಲ್ಲಿ ಪಟಾಕಿ ಮಾರಾಟ ಮಾಡುತಿದ್ದ ವ್ಯಕ್ತಿಗಳಿಬ್ಬರ ಪರಿಸ್ಪರ ಮಾತಿನಚಕಮಕಿ ನಡೆದು ಕೊನೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ ಎಲ್ಲಾ ಮಾರಾಟ ಕೇಂದ್ರವನ್ನು ತೆರವುಗೊಳಿಸಿದ ಘಟನೆ ಬುಧವಾರ ಸಂಜೆ ಕಾಪುವಿನಲ್ಲಿ ನಡೆದಿದೆ.

ಶಿರ್ವದ ಯಶವಂತ್ ಎಂಬವರು ಪಟಾಕಿ ಮಾರಾಟ ಕೇಂದ್ರವನ್ನು ತೆರೆದಿದ್ದರು. ಅದೇ ಜಾಗದಲ್ಲಿ ಇನ್ನೋರ್ವ ವ್ಯಾಪಾರಸ್ಥರು ಕೇಂದ್ರವನ್ನು ತೆರೆದಿದ್ದರು. ಈ ವೇಳೆ ಇಬ್ಬರೊಳಗೆ ಮಾತಿನಚಕಮಕಿ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಕಾಪು ಪೊಲೀಸರು ಕೂಡಲೇ ಕಾಪುವಿನಲ್ಲಿ ಇರುವ ಎಲ್ಲಾ ಪಟಾಕಿ ಕೇಂದ್ರವನ್ನು ತೆರವುಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News