ಪನ್ನ ಕುಮಾರ್‌ಗೆ ಸನ್ಮಾನ

Update: 2017-10-19 16:51 GMT

ಮಂಗಳೂರು, ಅ.19: ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ 317 ಡಿ ಜಿಲ್ಲೆ ವತಿಯಿಂದ ಚಿಕ್ಕಮಗಳೂರಿನ ಆದಿ ಚಿಂಚನಗಿರಿ ಐಟಿಸಿ ಎಂಜನಿಯರಿಂದ್ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ‘ಸುಯೋಗ’ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸೇವೆ ಸಲ್ಲಿಸಿದ ಹಾಗೂ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.

ಐದು ಅಂತಾರಾಷ್ಟ್ರೀಯ ಕ್ರೀಡಾಕೂಟದ 100, 200 ಹಾಗೂ 400 ಮೀಟರ್ ವೇಗದ ಓಟಗಳಲ್ಲಿ ಭಾಗವಹಿಸಿ ಸತತ ಪದಕಗಳನ್ನು ಪಡೆದ, ಇತ್ತೀಚೆಗೆ ನ್ಯೂಝಿಲ್ಯಾಂಡ್‌ನ ಆಕ್ಲೆಂಡ್‌ನಲ್ಲಿ ನಡೆದ ವರ್ಲ್ಡ್ ಮಾಸ್ಟರ್ಸ್‌ ಅಥ್ಲೆಟಿಕ್ ಚಾಂಪಿಯನ್‌ಶಿಪ್ 2017ರ 200 ಮತ್ತು 4400 ಮೀಟರ್ ಓಟಗಳಲ್ಲಿ 4ನೆ ಮತ್ತು 3ನೆ ಸ್ಥಾನ ಪಡೆದು 2019ರ ವಿಯೆಟ್ನಾಂನಲ್ಲಿ ನಡೆಯುವ ಮಾಸ್ಟರ್ಸ್‌ ಒಲಂಪಿಕ್ಸ್‌ನಲ್ಲಿ ಭಾಗವಹಿಸಲು ಅರ್ಹತೆ ಪಡೆದ ಭಾರತೀಯ ಸ್ಟ್ರೀಟ್ ಮಾಸ್ಟರ್ಸ್‌ ಮಂಗಳೂರಿನ ನಿವಾಸಿ ಮೆಟ್ರೋ ಗೋಲ್ಡ್ ಲಯನ್ ಸದಸ್ಯ ಹಿರಿಯ ನ್ಯಾಯವಾದಿ ಡಿ.ಪದ್ಮನಾಭ ಕುಮಾರ (ಪನ್ನ ಕುಮಾರ್) ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಕ್ಲಬ್‌ನ ಜಿಲ್ಲಾ ಗವರ್ನರ್ ಎಚ್.ಆರ್.ಹರೀಶ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸ್ವಾಮಿ ನಿರ್ಮಲಾನಂದರ ಕಿರಿಯ ಸ್ವಾಮೀಜಿ ಗುಣನಂದ ಸ್ವಾಮೀಜಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News