ಅ.21ರಂದು ಜಿಲ್ಲಾ ಮುಅಲ್ಲಿಂ ಸೆಮಿನಾರ್

Update: 2017-10-20 12:52 GMT

ಮಂಗಳೂರು, ಅ. 20: ಸುನ್ನೀ ಶಿಕ್ಷಕರ ಒಕ್ಕೂಟ ಮಂಗಳೂರು ಜಿಲ್ಲೆ ವತಿಯಿಂದ ಅ.21ರಂದು ಬೆಳಗ್ಗೆ 10:30 ಕ್ಕೆ ಅಲ್‌ಮದೀನಾ ಕಮ್ಯುನಿಟಿ ಹಾಲ್ ತಿಬ್ಲಪದವಿನಲ್ಲಿ ಜಿಲ್ಲಾ ಮುಅಲ್ಲಿಂ ಸೆಮಿನಾರ್ ನಡೆಯಲಿದೆ.

 ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಉಪಾಧ್ಯಕ್ಷ ಸಯ್ಯದ್ ಬಾಫಕಿ ತಂಙಳ್ ದುವಾ ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ರಾಜ್ಯಾಧ್ಯಕ್ಷ ಆತೂರು ಸಅದ್ ಮುಸ್ಲಿಯಾರ್ ವಹಿಸಲಿದ್ದಾರೆ. ಅಖಿಲ ಭಾರತ ಸುನ್ನೀ ಶಿಕ್ಷಣಾ ಮಂಡಳಿ ಕಾರ್ಯದರ್ಶಿ ಪ್ರೊ.ಎ.ಕೆ ಅಬ್ದುಲ್ ಹಮೀದ್ ಸಾಹೇಬ್ ಉದ್ಘಾಟಿಸಲಿದ್ದಾರೆ. ಡಾ.ಅಬ್ದುಲ್ ಅಝೀಝ್ ಫೈಝಿ ಚೆರುವಾಡಿ ವಿಷಯ ಮಂಡಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಕೇಂದ್ರೀಯ ಸಮಿತಿ ನಾಯಕ ಅಬೂ ಹನೀಫಿಲ್ ಫೈಝಿ ತೆನ್ನಲ, ವಿಲ್ಲಾ ಪಳ್ಳಿ ಉಸ್ತಾದ್, ಎನ್.ಎ. ಅಬ್ದುರ್ರಹ್ಮಾನ್ ಮದನಿ ಜೆಪ್ಪು, ಕೆ.ಕೆ.ಎಂ ಕಾಮಿಲ್ ಸಖಾಫಿ, ಸುಲೈಮಾನ್ ಸಖಾಫಿ ಕುಂಞಂಕುಲಂ, ಬಶೀರ್ ಮುಸ್ಲಿಯಾರ್ ಚೆರುಪ, ಮುಹ್ಯಿದ್ದೀನ್ ಸಅದಿ ತೋಟಾಲ್ ಮುಂತಾದವರು ಭಾಗವಹಿಸಲಿದ್ದಾರೆ.

ಸೆಮಿನಾರ್‌ನಲ್ಲಿ ಜಿಲ್ಲೆಯ ಎಲ್ಲಾ ಮದ್ರಸಗಳ ಸರ್ವ ಅಧ್ಯಾಪಕರು ಭಾಗವಹಿಸಬೇಕೆಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎಂ. ಮುಹಮ್ಮದ್ ಮದನಿ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News