ಗುತ್ತಿಗೆದಾರ ಮತ್ತು ಮನಪಾ ಇಂಜಿನಿಯರ್ ವಿರುದ್ಧ ದೂರು ದಾಖಲು

Update: 2017-10-21 16:01 GMT

ಮಂಗಳೂರು, ಅ.21: ನಗರದ ಸ್ಟೇಟ್‌ಬ್ಯಾಂಕ್ ಸಮೀಪದ ನೆಲ್ಲಿಕಾಯಿ ರಸ್ತೆಯ ಬಳಿಯ ಒಳಚರಂಡಿಯ ಗುಂಡಿಗೆ ಪೌರ ಕಾರ್ಮಿಕರನ್ನು ಇಳಿಸಿ ಕೆಲಸ ನಿರ್ವಹಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರ ನಝೀರ್ ಮತ್ತು ಮನಪಾ ಇಂಜಿನಿಯರ್ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೀಪಾವಳಿಯಂದು ಈ ಕಾರ್ಮಿಕರನ್ನು ಗುಂಡಿಗೆ ಇಳಿಸಿ ಕೆಲಸ ಮಾಡಿಸಿದ ಬಗ್ಗೆ ‘ವಾರ್ತಾಭಾರತಿ’ ಸುದ್ದಿ ಮಾಡಿ ಮನಪಾದ ಗಮನ ಸೆಳೆದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಪಿಎಂ ಶನಿವಾರ ಮನಪಾ ಕಚೇರಿ ಮುಂದೆ ಧರಣಿ ನಡೆಸಿತ್ತು. ತನ್ಮಧ್ಯೆ ಸಿಪಿಎಂ ಮುಖಂಡ ಯೋಗೀಶ್ ಜಪ್ಪಿನಮೊಗರು ನೀಡಿದ ದೂರಿನಂತೆ ಪಾಂಡೇಶ್ವರ ಪೊಲೀಸರು ವಿವಿಧ ಸೆಕ್ಷನ್‌ನಡಿ ಪ್ರಕರಣ ದಾಖಲಾಗಿಸಿದ್ದಾರೆ.

ಬುಧವಾರ ಈ ಪ್ರಕರಣ ನಡೆದು ಮನಪಾದ ಗಮನ ಸೆಳೆದಿದ್ದರೂ ಕೂಡ ಶುಕ್ರವಾರ ಬಂದರು ಠಾಣಾ ವ್ಯಾಪ್ತಿಯ ಡಾನ್‌ಬಾಸ್ಕೋ ಹಾಲ್ ಬಳಿ ಮತ್ತೆ ಇಂಥದ್ದೇ ಪ್ರಕರಣ ಬೆಳಕಿಗೆ ಬಂದಿತ್ತು. ಆದರೆ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಬಂದರು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News