×
Ad

ಹಾವು ಕಚ್ಚಿ ಬಾಲಕ ಮೃತ್ಯು

Update: 2017-10-22 21:15 IST

ಮಣಿಪಾಲ, ಅ.22: ವಿಷದ ಹಾವು ಕಚ್ಚಿ ಬಾಲಕನೊರ್ವ ಮೃತಪಟ್ಟ ಘಟನೆ ಕುಂಜಿಬೆಟ್ಟು ಪಡುಸಗ್ರಿ ಎಂಬಲ್ಲಿ ನಡೆದಿದೆ. ಮೃತನನ್ನು ಪಡುಸಗ್ರಿಯ ಮಂಜುನಾಥ ಪೂಜಾರಿ ಎಂಬವರ ಮಗ ಸುಮಂತ (13) ಎಂದು ಗುರುತಿಸಲಾಗಿದೆ.

ಕಡಿಯಾಳಿ ಕಮಲಾ ಬಾಯಿ ಹೈಸ್ಕೂಲ್‌ನ 9ನೆ ತರಗತಿಯ ವಿದ್ಯಾರ್ಥಿಯಾಗಿದ್ದ ಸುಮಂತ್ ಅ. 8ರಂದು ಸಂಜೆ 6:45ರ ಸುಮಾರಿಗೆ ಪಕ್ಕದ ಮನೆಯಿಂದ ಹಾಲು ತೆಗೆದುಕೊಂಡು ಮನೆಗೆ ಬರುವಾಗ ಗದ್ದೆಯ ಬದಿಯಲ್ಲಿ ಹುಲ್ಲು ಬೆಳೆದಿರುವ ಜಾಗದಲ್ಲಿ ವಿಷಪೂರಿತ ಹಾವು ಕಾಲಿಗೆ ಕಚ್ಚಿತ್ತೆನ್ನಲಾಗಿದೆ. ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಸುಮಂತ್‌ನನ್ನು ಕೂಡಲೇ ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೆ ಅ. 21ರಂದು ಆಸ್ಪತ್ರೆಯಲ್ಲಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News