‘ಸಿಟಿ ಮಾರ್ಕೆಟ್’ ವಾಣಿಜ್ಯ ಸಂಕೀರ್ಣ ಉದ್ಘಾಟನೆ

Update: 2017-10-22 16:28 GMT

ಮಂಗಳೂರು, ಅ.22: ಸಿಟಿ ಲ್ಯಾಂಡ್ ಡೆವಲಪರ್ಸ್‌ ಸಂಸ್ಥೆಯ ವತಿಯಿಂದ ನಗರದ ತೊಕ್ಕೊಟ್ಟು ಜಂಕ್ಷನ್‌ನಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ‘ಸಿಟಿ ಮಾರ್ಕೆಟ್’ ವಾಣಿಜ್ಯ ಕಟ್ಟಡ ರವಿವಾರ ಉದ್ಘಾಟನೆಗೊಂಡಿತು.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅವರು ‘ಸಿಟಿ ಮಾರ್ಕೆಟ್’ನ ಉದ್ಘಾಟನೆಯನ್ನು ನೆರವೇರಿಸಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಕರಾವಳಿ ಕರ್ನಾಟಕ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಯು.ಬಿ.ಸಲೀಂ, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಸದಸ್ಯ ಜಬ್ಬಾರ್ ಬೊಳಿಯಾರ್, ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೇನ್ ಕುಂಞಿಮೋನು, ಚಿರುಂಬ ಶ್ರೀ ಭಗವತಿ ಕ್ಷೇತ್ರದ ಆಡಳಿತ ಮೊಕ್ತೇಸರ ಚಂದ್ರಹಾಸ ಉಳ್ಳಾಲ, ಉಳ್ಳಾಲ ನಗರಸಭಾ ಸ್ಥಾಯೀ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಶಾಫಿ ಇಂಜಿನಿಯರ್, ಸಂಸ್ಥೆಯ ಪಾಲುದಾರರಾದ ಪಿ.ಕೆ.ಮುಹಮ್ಮದ್, ಡಾ. ಮುಹಮ್ಮದ್ ಇಬ್ರಾಹೀಂ, ಇಸ್ಮಾಯೀಲ್ ಸಾಗರ್, ಖಾಲಿದ್ ಸಾಗರ್ ಉಪಸ್ಥಿತರಿದ್ದರು.

ಬದ್ರುದ್ದೀನ್ ತಂಙಳ್ ಮಂಜೇಶ್ವರ ದುವಾ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಚಂದ್ರಹಾಸ ಉಳ್ಳಾಲ್, ಬೆಳೆಯುತ್ತಿರುವ ಉಳ್ಳಾಲ ನಗರಕ್ಕೆ ವಾಣಿಜ್ಯ ಸಂಕೀರ್ಣಗಳು ಅಗತ್ಯವಾಗಿದ್ದು, ಸಿಟಿ ಲ್ಯಾಂಡ್ ಡೆವಲಪರ್ಸ್‌ ಸಂಸ್ಥೆಯ ಪಾಲುದಾರರ ಶ್ರಮದಿಂದಾಗಿ ಇದು ಸಾಧ್ಯವಾಗಿದೆ. ಸಂಸ್ಥೆಯಿಂದ ಇನ್ನಷ್ಟು ವಾಣಿಜ್ಯ ಸಂಕೀರ್ಣಗಳು ನಿರ್ಮಾಣವಾಗಲಿ ಎಂದು ಹಾರೈಸಿದರು. ಅಯ್ಯೂಬ್ ಯು.ಪಿ. ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News