ಅಕ್ರಮ ಮರಳು ಸಾಗಾಟ: ಲಾರಿ ಸಹಿತ ಇಬ್ಬರ ಸೆರೆ
Update: 2017-10-23 17:18 GMT
ಕುಂದಾಪುರ, ಅ.23: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್ ಲಾರಿ ಹಾಗೂ ಅದರ ಚಾಲಕನನ್ನು ಕುಂದಾಪುರ ಗ್ರಾಮಾಂತರ ಪೊಲೀಸರು ಇಂದು ಬೆಳಗ್ಗೆ 9ಗಂಟೆ ಸುಮಾರಿಗೆ ಜಪ್ತ್ತಿ ಗ್ರಾಮದ ಸುಣ್ಣಾರಿ ಜಂಕ್ಷನ್ ಬಳಿ ವಶಪಡಿಸಿ ಕೊಂಡಿದ್ದಾರೆ.
ಮೊಳಹಳ್ಳಿ ಮರತ್ತೂರು ಎಂಬಲ್ಲಿಂದ ಮರಳನ್ನು ಕಳವು ಮಾಡಿ ಲಾರಿಯಲ್ಲಿ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿರುವ ಪೊಲೀಸರು ಲಾರಿ ಮತ್ತು ಅದರ ಮಾಲಕ ಬಸ್ರೂರು ಮೂರುಕೈಯ ಸುಧಾಕರ ಆಚಾರ್ಯ(47), ಚಾಲಕ ವಕ್ವಾಡಿಯ ರಿಯಾಜ್ ಶೇಕ್ ದಾದಾಪೀರ್(32) ಎಂಬವರನ್ನು ವಶಪಡಿಸಿಕೊಂಡರು.
ಟಿಪ್ಪರ್ ಲಾರಿಯ ಮೌಲ್ಯ 3,00,000ರೂ. ಹಾಗೂ ಲಾರಿಯಲ್ಲಿದ್ದ ಸುಮಾರು 2 ಯುನಿಟ್ ಮರಳಿನ ವೌಲ್ಯ 8ಸಾವಿರ ರೂ. ಎಂದು ಅಂದಾಜಿಸ ಲಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.