ಸಿಆರ್‌ಝಡ್: ಅಹವಾಲು ಸಲ್ಲಿಕೆಗೆ ನ.7ರವರೆಗೆ ಅವಕಾಶ

Update: 2017-10-23 17:39 GMT

ಉಡುಪಿ, ಅ.23: ಕರ್ನಾಟಕ ರಾಜ್ಯ ಕಡಲ ತೀರ ವಲಯ ನಿರ್ವಹಣೆಗೆ ಸಂಬಂಧಿಸಿದಂತೆ 2011ರ ಅಧಿಸೂಚನೆಯಂತೆ ಕಡಲ ತೀರ ವಲಯ ನಿರ್ವಹಣಾ ಯೋಜನೆಗಳನ್ನು ತಯಾರಿಸುವ ಸಂಬಂಧ ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆ ಮತ್ತು ಅನಿಸಿಕೆಗಳನ್ನು ಸಲ್ಲಿಸಲು ಮುಂದಿನ ನ.7ರವರೆಗೆ ಅವಕಾಶವನ್ನು ಕಲ್ಪಿಸಲಾಗಿದೆ.

ಈ ಸಂಬಂಧ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆ ಯಲ್ಲಿ ಲಿಖಿತ ರೂಪದಲ್ಲಿ 22 ಅರ್ಜಿಗಳನ್ನು ಸ್ವೀಕರಿಸಲಾಯಿತು. ಅಲ್ಲದೆ ಬೈಂದೂರು, ಕುಂದಾಪುರದ ಸದಾಶಿವ ಡಿ. ಪಡುವರಿ, ವೆಂಕಟೇಶ್ ಕಿಣಿ, ಕೋಟೇಶ್ವರದ ಚಂದ್ರಕಾಂತ್ ಶೆಣೈ ಹಾಗೂ ಮೀನುಗಾರ ಮುಖಂಡರಾದ ಕೇಶವ ಕುಂದರ್ ಇವರುಗಳು ಖುದ್ದು ಉಪಸ್ಥಿತರಿದ್ದು ತಮ್ಮ ಸಲಹೆ ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಿದರು.

(National Centre for Sustainable Coastal Management) ಈ ಸಂಬಂಸೋಮವಾರಜಿಲ್ಲಾಧಿಕಾರಿಗಳಕಚೇರಿಯಲ್ಲಿನಡೆದಸೆ ಯಲ್ಲಿ ಲಿಖಿತ ರೂಪದಲ್ಲಿ 22 ಅರ್ಜಿಗಳನ್ನು ಸ್ವೀಕರಿಸಲಾಯಿತು. ಅಲ್ಲದೆ ಬೈಂದೂರು, ಕುಂದಾಪುರದ ಸದಾಶಿವ ಡಿ. ಪಡುವರಿ, ವೆಂಕಟೇಶ್ ಕಿಣಿ, ಕೋಟೇಶ್ವರದ ಚಂದ್ರಕಾಂತ್ ಶೆಣೈ ಹಾಗೂ ಮೀನುಗಾರ ಮುಖಂಡರಾದ ಕೇಶವ ಕುಂದರ್ ಇವರುಗಳು ಖುದ್ದು ಉಪಸ್ಥಿತರಿದ್ದು ತಮ್ಮ ಸಲಹೆ ಹಾಗೂ ಆಕ್ಷೇಪಣೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲೆಯ ಸಿಆರ್‌ಝೆಡ್ ಪ್ರಾದೇಶಿಕ ನಿರ್ದೇಶಕ ಡಾ.ದಿನೇಶ್, ಸಮುದ್ರ ತೀರ ಸಂರಕ್ಷಣೆಗೆ ಕೇಂದ್ರ ಸರಕಾರ ರೂಪಿಸಿದ ನೀತಿ, ಬಳಿಕ ಆದ ತಿದ್ದುಪಡಿಗಳು, 2011ರ ಅಧಿಸೂಚನೆ ಪ್ರಕಾರ ನಕ್ಷೆ ರೂಪಿಸಲು ನಿರ್ದಿಷ್ಟ ಮಾನದಂಡಗಳನ್ನು ರೂಪಿಸಲಾಗಿದೆ. ಚೆನ್ನೈನ ಎನ್‌ಸಿಎಸ್‌ಸಿಎಂ ಇವರು ಈ ನಿಟ್ಟಿನಲ್ಲಿ ಅಗತ್ಯವಿರುವ ಕಡೆಗಳಿಗೆ ಕ್ಷೇತ್ರ ಭೇಟಿ ನೀಡಿ ನಿರಂತರ ಅಧ್ಯಯನದ ಮುಖಾಂತರವೇ ನಕ್ಷೆಯನ್ನು ಬರೆಯಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಪುರಸಭೆ, ಪಟ್ಟಣ ಪಂಚಾಯತಿ ವ್ಯಾಪ್ತಿಯ ಸಮುದ್ರ ತೀರಗಳನ್ನು, ಬಂದರು ಗಳನ್ನು ಸಿಆರ್‌ಝಡ್ ಮೂರರಿಂದ ಎರಡಕ್ಕೆ ಪರಿವರ್ತನೆ ಮಾಡಲಾಗುವುದು. ಬಂದರುಗಳ ಅಭಿವೃದ್ಧಿಗೆ ತೊಡಕಾಗದಂತೆ ಬಂದರು ಅಧಿಕಾರಿಗಳು ಪ್ರಸ್ತಾವನೆಗಳನ್ನು ಸಲ್ಲಿಸಬಹುದು. ಈ ಪ್ರದೇಶಗಳನ್ನು ಅಭಿವೃದ್ಧಿ ಹೊಂದಿದ ಪ್ರದೇಶಗಳೆಂದು ಪರಿಗಣಿಸಲು ಸಾಧ್ಯ ಎಂದು ಪ್ರಾದೇಶಿಕ ನಿರ್ದೇಶಕರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿದ್ದು, ಕೇರಳ, ಗೋವಾ ಮಾದರಿಯ ಅನುಮತಿಯನ್ನು ಕರ್ನಾಟಕಕ್ಕೂ ನೀಡಬೇಕೆಂದು ಸಭೆಯಲ್ಲಿ ಉಪಸ್ಥಿತರಿ್ದ ಸಾರ್ವಜನಿಕರು ಅಭಿಪ್ರಾಯಪಟ್ಟರು.

ಇಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಸ್ವೀಕರಿಸಿದ ಪ್ರಸ್ತಾವನೆ ಗಳಲ್ಲದೆ ಜಿಲ್ಲೆಯಿಂದ ನೇರವಾಗಿ ಸರಕಾರದ ಕಾರ್ಯದರ್ಶಿಗಳಿಗೂ ಅಹವಾಲು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸಭೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಡಾ.ಲಕ್ಷ್ಮಿಕಾಂತ್ ಉಸ್ಥಿತರಿದ್ದು ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News