‘ಸಮುದಾಯದತ್ತ ಶಾಲೆ’ ಕಾರ್ಯಕ್ರಮ

Update: 2017-10-23 18:02 GMT

ಮಂಗಳೂರು, ಅ. 23: ಕುದ್ರೋಳಿಯ ದ.ಕ.ಜಿ.ಪಂ.ಸ. ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಎಸ್‌ಡಿಎಂಸಿ ಅಧ್ಯಕ್ಷ ಅಖ್ತರ್ ಅಲಿ ಅವರ ಅಧ್ಯಕ್ಷತೆಯಲ್ಲಿ ‘ಸಮುದಾಯದತ್ತ ಶಾಲೆ’ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾರ್ಪೊರೇಟರ್ ಅಬ್ದುಲ್ ಅಝೀಝ್ ಹಾಗೂ ಬಲ್ಮಠ ಪ್ರೌಢ ಶಾಲೆಯಿಂದ ಪರಿವೀಕ್ಷಕರಾಗಿ ಭಾಗವಹಿಸಿದ ಮಾಧವಿ ಮಾತನಾಡಿದರು.

ಹಿರಿಯ ಶಿಕ್ಷಕಿ ಜಿ.ಬಿ.ಪ್ರೇಮಾ ಅವರು ಕಾರ್ಯಕ್ರಮದ ಉದ್ದೇಶದ ಬಗ್ಗೆ ವಿವರಿಸಿದರು. ಎಸ್‌ಡಿಎಂಸಿ ಸದಸ್ಯರಾದ ಉಮರ್ ಫಕ್ಹಿ, ಸಗೀರ್ ಅಹ್ಮದ್, ಅಸ್ಗರ್ ಅಲಿ, ಆಸ್ಮಾ, ಝುಬೈದಾ, ಕಸ್ತೂರಿ, ಹುಸ್ನಾ ಮತ್ತು ಸುಮಯ್ಯಾ ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕ ಮುಹಮ್ಮದ್ ಹನೀಫ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಗೌರವ ಶಿಕ್ಷಕಿ ಸೌಮ್ಯಾ ಹಾಗೂ ನಾಗರತ್ನ ಅವರು ಮಕ್ಕಳ ಮನೋರಂಜನೆ ಕಾರ್ಯಕ್ರಮ ನಡೆಸಿಕೊಟ್ಟರು. ಹಿರಿಯ ಶಿಕ್ಷಕಿ ಫಿಲೋಮಿನಾ ಸೆರಾವೋ ಕಾರ್ಯಕ್ರಮ ನಿರೂಪಿಸಿದರು. ಸಹ ಶಿಕ್ಷಕಿ ಆಸ್ಮಾ ಜಬೀನ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News