ಮಹಿಳೆಯ ಕುತ್ತಿಗೆಯಿಂದ ಸರ ಕಸಿದು ಪರಾರಿ : ದೂರು

Update: 2017-10-23 18:08 GMT

ಮಂಗಳೂರು, ಅ. 23: ಪಚ್ಚನಾಡಿ ಗ್ರಾಮದ ಶಿವಾಜಿನಗರ ಜಂಕ್ಷನ್‌ನಲ್ಲಿ ಗೂಡು ಅಂಗಡಿಯನ್ನು ಹೊಂದಿರುವ ಮಹಿಳೆಯಲ್ಲಿ ಇಬ್ಬರು ಬಂದು ಸಿಗರೇಟು ಕೇಳಿ ಬಳಿಕ ಕುತ್ತಿಗೆಯಿಂದ ಸರವನ್ನು ಕಸಿದು ಪರಾರಿಯಾಗಿರುವ ಘಟನೆ ಸೋಮವಾರ ನಡೆದಿದೆ.

ಪಚ್ಚನಾಡಿ ಗ್ರಾಮದ ಸುರೇಖಾ ಎಂಬವರೇ ಮೂರೂವರೆ ಪವನ್‌ನ ಕರಿಮಣಿ ಸರವನ್ನು ಕಳೆದುಕೊಂಡವರು. ಸುರೇಖಾ ಅವರು ತಮ್ಮ ಗೂಡು ಅಂಗಡಿ ಯಲ್ಲಿದ್ದ ಸಂದರ್ಭದಲ್ಲಿ ಕೆಂಪು ಬಣ್ಣದ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಗೂಡು ಅಂಗಡಿಯ ಎದುರು ವಾಹನವನ್ನು ನಿಲ್ಲಿಸಿ ಸಿಗರೇಟ್‌ನ್ನು ಕೇಳುವ ನೆಪದಲ್ಲಿ ಮಹಿಳೆಯ ಕುತ್ತಿಗೆಗೆ ಕೈ ಹಾಕಿ ಕರಿಮಣಿ ಸರವನ್ನು ಎಗರಿಸಿ ಬಂದ ವಾಹನದಲ್ಲೇ ಪರಾರಿಯಾಗಿದ್ದಾರೆ.

ಈ ಬಗ್ಗೆ ಸುರೇಖಾ ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News