ಅಂಗಡಿಯಿಂದ ನಗದು ಕಳವು: ದೂರು

Update: 2017-10-23 18:15 GMT

ಪುತ್ತೂರು, ಅ. 23: ನಗರದ ಅಂಗಡಿಯೊಂದರ ಬಾಗಿಲು ಮುರಿದು 2ಲಕ್ಷ ರೂ. ನಗದು ಕಳವು ನಡೆಸಿದ ಪ್ರಕರಣ ಪುತ್ತೂರು ನಗರದ ಕಲ್ಲಾರೆ ಎಂಬಲ್ಲಿ ಸೋಮವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ಕಲ್ಲಾರೆಯ ಸ್ವಾತಿ ಎಂಟರ್‌ಪ್ರೈಸಸ್‌ನಲ್ಲಿ ನಗದು ಕಳವು ನಡೆದಿದ್ದು, ಶನಿವಾರ ಸಂಜೆ ಸುಮಾರು 6ಗಂಟೆಯ ವೇಳೆಗೆ ತಮ್ಮ ಅಂಗಡಿಯ ಬಾಗಿಲು ಹಾಕಿ ಕೊಂಡು ಮಾಲಕರು ಮನೆಗೆ ತೆರಳಿದ್ದರು. ಸೋಮವಾರ ಬೆಳಗ್ಗೆ 9 ಗಂಟೆಗೆ ಅಂಗಡಿ ಬಾಗಿಲು ತೆರೆಯುವಾಗ ಕಳವು ನಡೆದಿರುವುದು ಬೆಳಕಿಗೆ ಬಂದಿದೆ. ಅಂಗಡಿಯ ಬಾಗಿಲು ಮುರಿದಿ ಒಳನುಗ್ಗಿದ್ದ ಕಳ್ಳರು, ಡ್ರಾವರ್‌ನೊಳಗಿದ್ದ 2 ಲಕ್ಷ ರೂ.ವನ್ನು ದೋಚಿದ್ದಾರೆ ಎಂದು ತಿಳಿದುಬಂದಿದೆ. ಮಾಲಕ ಗಣೇಶ್ ಕುಂಬ್ಲಾಡಿ ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News