ನಿಲ್ಲಿಸಿದ್ದ ಓರ್ಮಿ ಕಾರು ಕಳವು: ದೂರು

Update: 2017-10-23 18:17 GMT

ಪುತ್ತೂರು, ಅ. 23: ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಓಮ್ನಿ ಕಾರನ್ನು ಸೋಮವಾರ ಬೆಳಗ್ಗೆ ಕಳವು ನಡೆಸಿದ ಘಟನೆ ಪುತ್ತೂರು ನಗರದ ನೆಲ್ಲಿಕಟ್ಟೆ ಎಂಬಲ್ಲಿ ನಡೆದಿದೆ.

ಬೆಳಗ್ಗೆ 6 ಗಂಟೆಗೆ ನೆಲ್ಲಿಕಟ್ಟೆ ಬಳಿ ಓಮ್ನಿ ಕಾರು (ಕೆಎ 19 ಎನ್. 2952) ನಿಲ್ಲಿಸಿ ಮಾಲಕ ಉರಿಮಜಲು ನಿವಾಸಿ ಕೆ.ಎನ್. ವಿಜಯ ಕುಮಾರ್ ಸುಳ್ಯಕ್ಕೆ ತೆರಳಿದ್ದರು. 9 ಗಂಟೆ ಸುಮಾರಿಗೆ ಹಿಂದಿರುಗಿ ಬಂದು ನೋಡಿದಾಗ ಕಾರು ಕಳವಾಗಿರುವುದು ಬೆಳಕಿಗೆ ಬಂದಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News