ವಿಶ್ವಕರ್ಮ ಸೇವಾ ಸಂಘ: ಪದಾಧಿಕಾರಿಗಳ ಆಯ್ಕೆ
Update: 2017-10-24 20:08 IST
ಉಡುಪಿ, ಅ. 24: ವಿಶ್ವಕರ್ಮ ಸೇವಾ ಸಂಘ ಚಿಟ್ಪಾಡಿ ಮಂಚಿ ಇದರ ನೂತನ ಅಧ್ಯಕ್ಷರಾಗಿ ಸುಧಾಕರ್ ಆಚಾರ್ಯ ಕುಕ್ಕಿಕಟ್ಟೆ ಪುನರಾಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಶೇಖರ ಆಚಾರ್ಯ ಚಿಟ್ಪಾಡಿ, ಉಪಾಧ್ಯಕ್ಷರುಗಳಾಗಿ ಜನಾರ್ದನ ಎಸ್.ಕುಕ್ಕಿಕಟ್ಟೆ, ಸತೀಶ್ ಆಚಾರ್ಯ, ಪ್ರಧಾನ ಕಾರ್ಯದರ್ಶಿ ಯಾಗಿ ರಾಜೇಶ ಆಚಾರ್ಯ ಮಂಚಿ, ಜೊತೆ ಕಾರ್ಯದರ್ಶಿಯಾಗಿ ಪದ್ಮನಾಭ ಆಚಾರ್ಯ, ರಾಘವೇಂದ್ರ ಆಚಾರ್ಯ, ಕೋಶಧಿಕಾರಿಯಾಗಿ ಅಶೋಕ ಆಚಾರ್ಯ, ಲೆಕ್ಕ ಪರಿಶೋಧಕರಾಗಿ ಭಾಸ್ಕರ್ ಆಚಾರ್ಯ, ಸಂಘಟನಾ ಕಾರ್ಯದರ್ಶಿಯಾಗಿ ವಾಸುದೇವ ವ್ಯಾಸರಾಯ, ಕ್ರೀಡಾ ಕಾರ್ಯದರ್ಶಿ ಯಾಗಿ ದಯಾನಂದ, ಪ್ರದೀಪ್, ಟಿ.ಜಿ.ಪ್ರಭಾಕರ್ ಆಯ್ಕೆಯಾದರು.