ಪತಿ ಮನೆಯಲ್ಲಿ ಕಿರುಕುಳ: ಯುವತಿ ಆತ್ಮಹತ್ಯೆ
Update: 2017-10-27 23:13 IST
ಶಂಕರನಾರಾಯಣ, ಅ.27: ಗಂಡನ ಮನೆಯವರ ಕಿರುಕುಳದಿಂದ ಮನ ನೊಂದ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಅ.26 ರಂದು ರಾತ್ರಿ 8:45ರ ಸುಮಾರಿಗೆ 76 ಹಾಲಾಡಿ ಗ್ರಾಮದ ತಟ್ಟೊಟ್ಟು ಎಂಬಲ್ಲಿ ನಡೆದಿದೆ.
ಮೃತರನ್ನು ಹೆಗ್ಗುಂಜೆ ಗ್ರಾಮದ ರಾಮ ನಾಯ್ಕ ಎಂಬವರ ಮಗಳು ರೇಖಾ (28) ಎಂದು ಗುರುತಿಸಲಾಗಿದೆ. ಈಕೆಗೆ ಗಂಡ, ಮಾವ, ಅತ್ತೆ, ಭಾವ ಹಾಗೂ ಮೈದುನರು ಮಾನಸಿಕ ಹಿಂಸೆ ನೀಡುತ್ತಿದ್ದು, ಇದರಿಂದ ಮನನೊಂದ ಆಕೆ ತನ್ನ ಗಂಡನ ಮನೆಯ ಬಳಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ ಎಂದು ತಾಯಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.